September 20, 2024

ಶಿರಾಳಕೊಪ್ಪದ ಕುಮಾರಿ ನಿಧಿ ರಮೇಶ್ ಭಂಡಾರಿ ಸುಳ್ಯದ ಕೆ.ವಿ.ಜಿ. ವೈದ್ಯಕೀಯ ಕಾಲೇಜಿನಲ್ಲಿ  MBBS ನ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದರೊಂದಿಗೆ ವೈದ್ಯಕೀಯ ಪದವಿ ಪೂರೈಸಿದ್ದಾರೆ.

ಕುಮಾರಿ ನಿಧಿ ಶಿರಾಳಕೊಪ್ಪದ ಶ್ರೀ ರಮೇಶ್ ಭಂಡಾರಿ ಮತ್ತು ಶ್ರೀಮತಿ ಉಷಾ ರಮೇಶ್ ಭಂಡಾರಿಯವರ ಪ್ರಥಮ ಪುತ್ರಿ. ಶ್ರೀಯುತ ರಮೇಶ್ ಭಂಡಾರಿಯವರು ಶಿವಮೊಗ್ಗದ  ಕರ್ನಾಟಕ ಹಾಲು ಮಹಾಮಂಡಳಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಇವರ ಪತ್ನಿ ಶ್ರೀಮತಿ ಉಷಾ ರಮೇಶ್ ಭಂಡಾರಿಯವರು ಮೂಲತಃ ಸುರತ್ಕಲ್ ನ ತಡಂಬೈಲ್ ನವರು.ಇವರ ದ್ವಿತೀಯ ಪುತ್ರಿ ಶ್ರೇಯಾ ರಮೇಶ ಭಂಡಾರಿ ಪ್ರಸ್ತುತ ಉಡುಪಿಯ ಉದ್ಯಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ.

ಈ ಶುಭ ಸಂದರ್ಭದಲ್ಲಿ ಕುಮಾರಿ ನಿಧಿ ಅವರಿಗೆ ಅವರ ತಂದೆ, ತಾಯಿ, ಅಜ್ಜಿ ಗುಲಾಬಿ ಮಹಾಬಲ ಭಂಡಾರಿ, ಚಿಕ್ಕಪ್ಪ ಚಿಕ್ಕಮ್ಮಂದಿರು, ದೊಡ್ಡಪ್ಪ ದೊಡ್ಡಮ್ಮಂದಿರು, ಅತ್ತೆ ಮಾವಂದಿರು, ಶಿರಾಳಕೊಪ್ಪ, ಸುರತ್ಕಲ್ ತಡಂಬೈಲ್, ಕುಂದಾಪುರ, ಹಂಗ್ಳೂರು, ಮೂಲ್ಕಿಯ ಚಿತ್ರಾಪು ಮೂಲದ ಭಂಡಾರಿ ಕುಟುಂಬಸ್ಥರು ಹಾಗೂ ಸಹಪಾಠಿ ಸ್ನೇಹಿತರು ಶುಭ ಹಾರೈಸುತ್ತಿದ್ದಾರೆ.

ವೈದ್ಯಕೀಯ ಪದವಿ ಪಡೆದು ವೈದ್ಯರಾಗಿರುವ ಕೆಲವೇ ಕೆಲವು ಭಂಡಾರಿ ಬಂಧುಗಳ ಸಾಲಿಗೆ ಸೇರಿರುವ ಕುಮಾರಿ ನಿಧಿ ರಮೇಶ್ ಭಂಡಾರಿಯವರಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು, ಉಜ್ವಲ ಭವಿಷ್ಯವನ್ನು ಕರುಣಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಕೋರುತ್ತದೆ.

ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

3 thoughts on “ವೈದ್ಯಕೀಯ ಪದವಿ ಪೂರೈಸಿದ ಶಿರಾಳಕೊಪ್ಪದ ಕುಮಾರಿ ನಿಧಿ ರಮೇಶ್ ಭಂಡಾರಿ.

  1. Wishing you bright future & success. All your dreams come true. Proud feeling for our community. Dr. Nidhi.

    Information relating to community’s happiness & success stories are shared in the internet is newer way of reaching our community and it’s flurishing.
    Bhaskar bhandary & bhandary varthe.
    Thank you🙏

Leave a Reply

Your email address will not be published. Required fields are marked *