September 20, 2024

ಕಾರ್ಕಳದ ಗುಂಡಾಜೆಯ ಶ್ರೀ ಪ್ರಮೋದ್ ಭಂಡಾರಿ ಮತ್ತು ಶ್ರೀಮತಿ ಸವಿತಾ ಪ್ರಮೋದ್ ಭಂಡಾರಿ ದಂಪತಿಯು ತಮ್ಮ ಪುತ್ರ “ಮಾಸ್ಟರ್ ಪ್ರನ್ವಿತ್”  ನ ಹುಟ್ಟುಹಬ್ಬವನ್ನು ಫೆಬ್ರವರಿ 6, 2019 ರ ಬುಧವಾರ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಐದು ವರ್ಷದೊಳಗಿನ ಮಕ್ಕಳು ತಮ್ಮ ಪೋಷಕರು ಮಾಡುವ ಕಾರ್ಯವನ್ನು ಅನುಸರಿಸುತ್ತಾರೆ. ಆದ್ದರಿಂದ ತಮ್ಮ ಮಗನೂ ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ,ಅಶಕ್ತರಿಗೆ ನೆರವಾಗುವ ಗುಣ ರೂಡಿಸಿಕೊಳ್ಳಲಿ ಎಂಬ ಸದುದ್ಧೇಶದಿಂದ ಪ್ರನ್ವಿತ್ ನ ಹುಟ್ಟು ಹಬ್ಬವನ್ನು ಕಾರ್ಕಳದ “ವಿಜೇತ ವಿಕಲಚೇತನ ಮಕ್ಕಳ ಶಾಲೆ” ಯಲ್ಲಿ ಆಚರಿಸುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ ಪ್ರನ್ವಿತ್ ಗೆ ತಂದೆ, ತಾಯಿ, ಅಜ್ಜಿ, ದೊಡ್ಡಪ್ಪ ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅತ್ತೆ ಮಾವಂದಿರು ಹಾಗೂ ಕುಟುಂಬಸ್ಥರು ಶುಭ ಹಾರೈಸುತ್ತಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಪ್ರನ್ವಿತ್ ಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನು ಕರುಣಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

ವರದಿ : ಕಿಶೋರ್ ಭಂಡಾರಿ ಕೂರಾಡಿ.

Leave a Reply

Your email address will not be published. Required fields are marked *