September 20, 2024

ಮೂಡುಬಿದಿರೆ ಪುತ್ತಿಗೆಯ ನಡಿಗುತ್ತು ದಿವಂಗತ ಆನಂದ ಭಂಡಾರಿಯವರ ಧರ್ಮಪತ್ನಿ ಇಂದಿರಾ ಆನಂದ್ ಭಂಡಾರಿಯವರು ಫೆಬ್ರುವರಿ 9, 2019 ರ ಶನಿವಾರ ರಾತ್ರಿ 10 ಗಂಟೆಗೆ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು. 

ಇವರು ಮೂಡುಬಿದಿರೆ ಪುತ್ತಿಗೆಯ ಶ್ರೀ ಶೈಲೇಂದ್ರ ರಾಜ್ ರವರ ಧರ್ಮಪತ್ನಿ ಶ್ರೀಮತಿ ಉಷಾ ಶೈಲೇಂದ್ರ ರಾಜ್ ರವರ ತಾಯಿ.

ಮೃತರು ಮಗಳು, ಅಳಿಯ, ಮೊಮ್ಮಕ್ಕಳಾದ ಶ್ರೀಷಾ, ನಿಶಾ ಮತ್ತು  ಕುಟುಂಬಸ್ಥರನ್ನು ಅಗಲಿದ್ದಾರೆ. 

ಇಂದಿರಾ ಆನಂದ್ ಭಂಡಾರಿಯವರ ನಿಧನದಿಂದ ದುಃಖತಪ್ತರಾದ ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ, ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶ್ರೀ ದೇವರಲ್ಲಿ ಪ್ರಾರ್ಥಿಸುತ್ತದೆ.

“ಭಂಡಾರಿವಾರ್ತೆ.”

Leave a Reply

Your email address will not be published. Required fields are marked *