September 20, 2024

ಗುಜರ್ , ಗುಜರನ್

ಗುಜ್ಜೆರ್ ಅಥವಾ ಗುಜರನ್ ಸಮುದಾಯ ತುಳುನಾಡಿಗೆ ವಲಸೆ ಬಂದಿರುವುದಕ್ಕೆ ಸ್ಪಷ್ಡ ಪುರಾವೆ ದೊರೆಯುತ್ತದೆ. ತುಳುನಾಡಿನ ಇತರ ಸಮುದಾಯ ಮತ್ತು ವಲಸೆ ಸಮುದಾಯಗಳ ಅಧ್ಯಯನ ನಡೆಸಿದಾಗ ಗುಜರನ್ನರ ಮೂಲ ಸ್ಪಷ್ಟವಾಗಿ ತಿಳಿದುಬರುತ್ತದೆ. 
ಗುಜರನ್ನರು ಮೂಲತಃ ದಕ್ಷಿಣ ರಷ್ಯಾ ದೇಶದ ಜಾರ್ಜಿಯಾದವರು ( ಪರ್ಷಿಯನ್ ಭಾಷೆಯಲ್ಲಿ ಗುಜ್ರಿಯಾ ಎಂಬ ಉಚ್ಚಾರಣೆಯಿದೆ.) ನಂತರದ ದಿನಗಳಲ್ಲಿ ಈ ಜನಾಂಗದ ಜನರು ಅಪ್ಗಾನಿಸ್ತಾನ , ಪಾಕಿಸ್ತಾನ ಮೂಲಕ ಭಾರತಕ್ಕೆ ಕಾಲಿಟ್ಟರು. ಪ್ರಾಚೀನ ಕಾಲದಲ್ಲಿ ಭಾರತಕ್ಕೆ ವಲಸೆ ಬಂದ ಗುಜರನ್ನರು ಭಾರತದ ಕಾಶ್ಮೀರ, ಪಂಜಾಬ್ , ರಾಜಸ್ತಾನ ಮತ್ತು ಗುಜರಾತ್ ಪ್ರಾಂತ್ಯಗಳಲ್ಲಿ ನೆಲೆಯೂರಿದ್ದರು. ಹೆಸರೇ ತಿಳಿಸುವಂತೆ ‘ಗುಜರಾತ್’ ಹೆಸರು ಗುಜರನ್ನರು ನೆಲೆಯೂರಿದ ನಾಡು. ಇಲ್ಲಿ ಈಗಲೂ ಗುಜರ್/ಗುಜ್ಜರ್ ಸಮುದಾಯದ ಜನ ಕಂಡುಬರುತ್ತಾರೆ. ಕ್ರಮೇಣ ಗುಜರನ್ನರು ತುಳುನಾಡಿನಲ್ಲೂ ನೆಲೆಯೂರಿದರು.
ತುಳುನಾಡಿನಲ್ಲಿ ಅಗೋಳಿ ಮಂಜಣ ಎಂಬ ಪ್ರಸಿದ್ದ ವೀರ ಪುರುಷ ಜನಿಸಿದ್ದ .‌ ಈತ ಗುಜರನ್ ಬರಿಯ ವೀರ ಪುರುಷ.

ಗುಜ್ಜೆ: ಹಲಸಿನ ಹಣ್ಣಿಗೆ ಸಾಮಾನ್ಯವಾಗಿ ತುಳುವಿನಲ್ಲಿ ಪೆಲಕಾಯಿ ಎನ್ನುತ್ತಾರೆ. ಗುಜ್ಜೆ ಎಂಬ ಪದವೂ ಬಳಕೆಯಲ್ಲಿದೆ. ಆದರೆ ಗುಜ್ಜೆ ಎಂಬುದು ಹಲಸಿನ ಮರದ ಒಂದು ತಳಿಯಾಗಿದ್ದು ಕ್ರಮೇಣ ಪೆಲಕಾಯಿ ಬದಲು ಆ ಶ್ರೇಷ್ಟ ತಳಿಯ ಹೆಸರು ಜನಪ್ರಿಯವಾಯಿತು. ಗುಜ್ಜರ್ ಬುಡಕಟ್ಟು ಅಥವಾ ವಲಸೆ ಜನಾಂಗದ ಜನ ಈ ತಳಿಯನ್ನು ತುಳುನಾಡಿಗೆ ಪರಿಚಯಿಸಿದ ಕಾರಣ ಈ ತಳಿಗೆ ‘ಗುಜ್ಜೆ ‘ ಎಂಬ ಹೆಸರು ಬಂದಿತು. ಬಾಟಲ್ (Minaral water) ನೀರಿಗೆ  ಬಿಸ್ಲರಿ ಹೆಸರು ಬಂದಂತೆ  ಪೆಲಕಾಯಿಗಿಂತ ಗುಜ್ಜೆ ಜನಪ್ರಿಯವಾಯಿತು. ಎಲ್ಲದಕ್ಕೂ ಗುಜ್ಜೆ ಎನ್ನುವ ಕಾರಣ ಗುಜರನ್ನರು ತಂದ ಹಲಸಿನ ತಳಿ ಯಾವುದೆಂದು ತಿಳಿಯಲು ಸಾಧ್ಯವಾಗುವುದಿಲ್ಲ.

ಗುಜ್ಜಾಡಿ: ಗುಜ್ಜರ್ ಸಮುದಾಯ ಕರಾವಳಿ ಮೂಲಕ ಉಡುಪಿಯ ಸಮೀಪ ನೆಲೆಯೂರಿದ ಪ್ರದೇಶವಾಗಿದೆ.


ಗುಜ್ಜರಬೆಟ್ಟು:ಗುಜ್ಜರ್ ಜನಾಂಗ ತುಳುನಾಡಿನಲ್ಲಿ ನೆಲೆಸಿ ಒಣಭೂಮಿಯಲ್ಲಿ ಕೃಷಿ ಮಾಡಿದ ಪ್ರದೇಶ ಉಡುಪಿಯ ಕೆಮ್ಮಣ್ಣು ಗ್ರಾಮದಲ್ಲಿದೆ. 

ಗುಜ್ಜರ ಕೆರೆ: ಇದು ಅತೀ ಪ್ರಾಚೀನ ಕೆರೆಯಾಗಿದ್ದು, ಈಗ ಹೂಳು ತುಂಬಿ ಮುಚ್ಚಿ ಹೋಗಿದೆ. ಇದು ಗುಜರನ್ನರು ವಲಸೆ ಬಂದ ನಂತರ ನಿರ್ಮಿಸಿದ ಕೆರೆಯಾಗಿದೆ. ದಕ್ಷಿಣ ಮಂಗಳೂರಿನ ಜಪ್ಪಿನಮೊಗೆರು ಭಾಗದಲ್ಲಿ ಈ ಕೆರೆ ಕಂಡು ಬರುತ್ತದೆ. 

ಗುಜರನ್ : ತುಳುನಾಡಿನಲ್ಲಿ ಗುಜ್ಜರ್ ಎಂಬುದು ಗುಜರನ್ ಆಗಿ ಬದಲಾಗಿದ್ದು ಒಂದು ಪುರಾತನ  ಜನಾಂಗ. ಗುಜರನ್ ಒಂದು ಅತೀ ಪ್ರಾಚೀನ ಜಾತಿ ಪೂರ್ವ  ಬರಿಗಳಲ್ಲಿ ಒಂದಾಗಿದ್ದು. ಬಂಟ ಮತ್ತು ಇತರ ಎಲ್ಲ ತುಳುವ ಜಾತಿಗಳಲ್ಲಿ ಕಂಡುಬರುವ ಸಾಮಾನ್ಯ ವಂಶವಾಹಿ ಬರಿಯಾಗಿದೆ.

ಪ್ರಶಾಂತ್ ಭಂಡಾರಿ ಕಾರ್ಕಳ

Leave a Reply

Your email address will not be published. Required fields are marked *