September 20, 2024

ಬಂಟ್ವಾಳ ಎಸ್‌ .ವಿ. ಎಸ್‌ .ಕಾಲೇಜಿನಲ್ಲಿ ಕಳೆದ  29  ವರ್ಷಗಳಿಂದ ಉಪನ್ಯಾಸಕರಾಗಿ  ಸೇವೆ ಸಲ್ಲಿಸಿದ್ದ ರಾಜ್ಯಶಾಸ್ತ್ರ  ವಿಭಾಗದ ಮುಖ್ಯಸ್ಥ  ಪ್ರೊಫೆಸರ್ ನಾರಾಯಣ್ ಭಂಡಾರಿ ಜುಲೈ 31 ರಂದು ಸೇವೆಯಿಂದ ನಿವೃತ್ತಿಯಾದರು. 

ಕಾಲೇಜಿನಲ್ಲಿ N.C.C.ಮತ್ತು  N.S.S. ಹಾಗೂ ವಿದ್ಯಾರ್ಥಿ  ಕ್ಷೇಮ ಪಾಲನಾ ಸಮಿತಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಬಂಟ್ವಾಳ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾಗಿ ಹಾಗೂ ಗೌರವ ಅಧ್ಯಕ್ಷರಾಗಿ ಸಂಘದ ಅಭಿವೃದ್ಧಿಗೆ ಬಹಳಷ್ಟು  ಶ್ರಮಿಸಿದ್ದರೆ ಶಿಕ್ಷಣಕ್ಕೆ  ಹೆಚ್ಚಿನ ಪ್ರೋತ್ಸಾಹ  ನೀಡುತ್ತಿದ್ದು ನಮ್ಮ  ಸಮಾಜದ ಆಥಿ೯ಕ  ಹಿಂದುಳಿದ  ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವನ್ನು ಬಹಳಷ್ಟು ಗುಪ್ತವಾಗಿ ಮಾಡುತ್ತಿದ್ದರು ಹಾಗೂ ಸಮಾಜದ ಕೊಡುಗೈ ದಾನಿಯಾಗಿರುತ್ತಾರೆ  ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಉತ್ಸವ ಸಮಿತಿಯ  ಪದಾಧಿಕಾರಿಯಾಗಿ ಸೇವೆ  ಸಲ್ಲಿಸಿದ್ದಾರೆ  ದಕ್ಷಿಣ  ಕನ್ನಡ ಜಿಲ್ಲಾ ಸವಿತಾ ಸಮಾಜದಲ್ಲಿ  ಉಪಾಧ್ಯಕ್ಷರಾಗಿ ಸೇವೆ ಮಾಡಿದ್ದಾರೆ  ಕಾಲೇಜಿನಲ್ಲಿ ಹಾಗೂ ಬಂಟ್ವಾದ  ಆಸುಪಾಸಿನಲ್ಲಿ  ಭಂಡಾರಿ  ಸರ್ ಎಂದು ಪ್ರಸಿದ್ಧಿಯಾಗಿರುತ್ತಾರೆ ಇವರ ಪತ್ನಿ  ಯಶೋಧ ಬಂಟ್ವಾಳ  ಬಿ.ಎಸ್‌ .ಎನ್.ಎಲ್ . ಕಚೇರಿ  ಅಧೀಕ್ಷಕಿಯಾಗಿ ಕತ್ಯವ೯ ನಿರ್ವಹಿಸುತ್ತಿದ್ದಾರೆ  ಪುತ್ರಿ  ಶ್ರೀಮತಿ ನವ್ಯ  ಕಾಕ೯ಳ ನಿತ್ಯಾನಂದ ಎಲೆಕ್ಟ್ರಾನಿಕ್  ಸಂಸ್ಥೆಯ ಮಾಲಿಕ ನಿತ್ಯಾನಂದ  ಅವರ ಪತ್ನಿ  ಇನ್ನೊವ೯ ಪುತ್ರಿ  ಕು॥ ನಿಧಿ ಕೆ.ಪಿ.ಎಸ್‌ .ಸಿ  ಪರೀಕ್ಷೆ ಯಲ್ಲಿ  ಅತ್ಯುತ್ತಮ  ಅಂಕದೊಂದಿಗೆ ಉತ್ತೀರ್ಣರಾಗಿ ಪ್ರಸ್ತುತ ಐ.ಎ.ಎಸ್‌ . ಶಿಕ್ಷಣ ಪಡೆಯಲು ದೆಹಲಿಯಲ್ಲಿ  ವ್ಯಾಸಂಗ ಮಾಡುತ್ತಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘ  (ಆಮುಕ್ತ್) ದ ವತಿಯಿಂದ  ಮಂಗಳೂರಿನ ಎಸ್‌ .ಡಿ.ಎಮ್ . ಕಾನೂನು  ಕಾಲೇಜಿನಲ್ಲಿ  ನಡೆದ ವಾರ್ಷಿಕ ಮಹಾಸಭೆಯಲ್ಲಿ ಆದಿತ್ಯವಾರ ದಂದು ಪ್ರೊ ॥ ನಾರಾಯಣ್ ಭಂಡಾರಿ ಯವರನ್ನು   ಸನ್ಮಾನಿಸಲಾಯಿತು  ವೇದಿಕೆಯಲ್ಲಿ  ಆಮುಕ್ತ್ ಅಧ್ಯಕ್ಷ   ಪ್ರೊ॥ ಜೋಸೆಫ್ ಎಮ್ .ಎನ್. , ಪ್ರಧಾನ ಕಾರ್ಯದರ್ಶಿ  ಡಾ॥ ವಿಶಾಲ ಬಿ.ಕೆ.,  ಖಜಾಂಚಿ  ಗೋಪಾಲ  ಗೋಖಲೆ,  ಮೂಡಬಿದ್ರೆ  ಮಹಾವೀರ  ಕಾಲೇಜಿನ ಉಪನ್ಯಾಸಕ  ಪ್ರವೀಣ್ ಹಾಗೂ ಪದಾಧಿಕಾರಿಗಳು  ಉಪಸ್ಥಿತರಿದ್ದರು.

ನಿವೃತ್ತಿ ಜೀವನವು ಸುಖ ಶಾಂತಿ ನೆಮ್ಮದಿಯ ಬದುಕನ್ನು  ಭಗವಂತನು ಕರುಣಿಸಲಿ ಎಂದು  ಭಂಡಾರಿ ಕುಟುಂಬದ ಮನೆ ಮನೆಯ ಮಾತು ಭಂಡಾರಿ ವಾತೆ೯ಯ ಹಾದಿ೯ಕ  ಶುಭ ಹಾರೈಕೆಗಳು.

ಭಂಡಾರಿ ವಾತೆ೯

Leave a Reply

Your email address will not be published. Required fields are marked *