September 20, 2024

ಕೈರಂಗಳ ದಿವಂಗತ ಆನಂದ ಭಂಡಾರಿ ಹಾಗೂ ಶ್ರೀಮತಿ ದೇವಕಿ ಆನಂದ ಭಂಡಾರಿಯವರ ಪುತ್ರ…

ಚಿ॥ ತೀರ್ಥಪ್ರಸಾದ್.

ಹಾಗೂ

ಚಿ॥ಸೌ॥ ಶ್ವೇತಾ.

ಮುಂಬಯಿ ಡೊಂಬಿವಿಲಿ ಸಂಜೀವ ಭಂಡಾರಿ ಹಾಗೂ ಕಡಂದಲೆ ಶ್ರೀಮತಿ ಸುನಂದಾ ಸಂಜೀವ ಭಂಡಾರಿಯವರ ಪುತ್ರಿ.

ಇವರ ವಿವಾಹ ಮಹೋತ್ಸವವು ನವೆಂಬರ್ 3,2019 ರ ರವಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಭ್ರಮದಿಂದ ಜರುಗಿತು.ನಂತರ ಔತಣ ಕೂಟವು ಸುರತ್ಕಲ್ ನ “ಕುಲಾಲ ಭವನ” ದಲ್ಲಿ ನಡೆಯಿತು.ವಿವಾಹ ಸಂಭ್ರಮದಲ್ಲಿ ಅಪಾರ ಸಂಖ್ಯೆಯ ಬಂಧು ಬಾಂಧವರು,ಸ್ನೇಹಿತರು, ಹಿತೈಷಿಗಳು, ಆತ್ಮೀಯರು ಭಾಗವಹಿಸಿ ನೂತನ ವಧುವರರಿಗೆ ಶುಭ ಹಾರೈಸಿದರು.

ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ ತೀರ್ಥಪ್ರಸಾದ್ ಹಾಗೂ ಶ್ವೇತಾ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

ಭಂಡಾರಿವಾರ್ತೆ.

Leave a Reply

Your email address will not be published. Required fields are marked *