September 20, 2024

ಮಂಗಳೂರು ತಾಲೂಕಿನ ಕೂಳೂರು ಶ್ರೀ ಸುಂದರ ಭಂಡಾರಿ ಕೂಳೂರು ರವರು ಜನವರಿ 29 ನೇ ಬುಧವಾರದಂದು ಮುಂಜಾನೆ ಚಿತ್ರಾಪುರದ ತನ್ನ ನಿವಾಸ ದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.ಇವರಿಗೆ 79 ವರ್ಷ ವಯಸ್ಸಾಗಿತ್ತು.

ಮಂಗಳೂರು ತಾಲೂಕು ವ್ಯವಸಾಯ ಉತ್ಪನ್ನ ಸಹಕಾರಿ ಮಾರಾಟ ಸಂಘ ಕೂಳೂರು ಇಲ್ಲಿ ಸುದೀರ್ಘ 36 ವರ್ಷ ಕರ್ತವ್ಯ ನಿರ್ವಹಿಸಿ ಅಧಿಕಾರಿ ಹುದ್ದೆಯಿಂದ ನಿವೃತ್ತರಾಗಿದ್ದರು.

ಕೂಳೂರಿನ ಪ್ರತಿಷ್ಠಿತ ಕೃಷಿ ಕುಟುಂಬದಿಂದ ಬೆಳೆದು ಬಂದಿರುವ ಇವರು ಪ್ರಗತಿಪರ ಕೃಷಿಕರಾಗಿ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದರು.

ಕೂಳೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ, ಕೋಶಾಧಿಕಾರಿಯಾಗಿ ಪ್ರಸ್ತುತ ಗೌರವ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಲ್ಕು ಮಂದಿ ಸಹೋದರ ಮತ್ತು ನಾಲ್ಕು ಮಂದಿ ಸಹೋದರಿಯರು ಹಾಗೂ ಪತ್ನಿ ಶ್ರೀಮತಿ ಸುನೀತ ಸುಂದರ ಭಂಡಾರಿ , ಪುತ್ರ ಶ್ರೀ ಓಂ ಪ್ರಸಾದ್ ಕೂಳೂರು ಪುತ್ರಿಯರಾದ ಶ್ರೀಮತಿ ಸುಜ್ಯೋತಿ ದಯಾನಂದ ಭಂಡಾರಿ ಅಂಬಲಪಾಡಿ ಉಡುಪಿ , ಶ್ರೀಮತಿ ಸುಚಿತ್ರ ಸಂತೋಷ ಭಂಡಾರಿ ಉದ್ಯಾವರ , ಸೊಸೆ ಶ್ರೀಮತಿ ಕುಸುಮ ಓಂಪ್ರಸಾದ್ ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಸಂಖ್ಯೆಯಲ್ಲಿ ಬಂದು ಬಳಗವನ್ನು ಅಗಲಿದ್ದಾರೆ.
ಶ್ರೀ ಸುಂದರ ಭಂಡಾರಿ ಯವರ ನಿಧನಕ್ಕೆ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಸಂತಾಪ ಸೂಚಿಸುತ್ತಾ ಭಗವಂತನು ಪತ್ನಿ ಮಕ್ಕಳಿಗೆ ಮತ್ತು ಕುಟುಂಬಸ್ಥರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥನೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *