September 20, 2024
ಪುತ್ತೂರು ತಾಲೂಕಿನ ದಿವಂಗತ ಶ್ರೀ ತನಿಯಾ ಭಂಡಾರಿ ಮತ್ತು ದಿವಂಗತ ಶ್ರೀಮತಿ ತಂಗಿ ಭಂಡಾರಿ ದಂಪತಿಯ ಪುತ್ರ. ಬಂಟ್ವಾಳ ತಾಲೂಕಿನ  ಬಿ.ಸಿ.ರೋಡ್‌ ಶ್ರೀ ಆನಂದ ಭಂಡಾರಿ  ಪುತ್ತೂರು (82 ವರ್ಷ) ಮಾರ್ಚ್ 1, 2020 ರ  ಆದಿತ್ಯವಾರದಂದು  ವಯೋಸಹಜ ಅಸೌಖ್ಯದಿಂದ ಮನೆಯಲ್ಲಿ ನಿಧನರಾದರು.
 
 
ಎಲ್ಲರೊಂದಿಗೂ ಹೆಚ್ಚು ಆತ್ಮೀಯರಾಗಿದ್ದು ಪರೋಪಕಾರಕ್ಕೆ ಹೆಸರುವಾಸಿಯಾಗಿದ್ದ ಇವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಬಿ.ಸಿ.ರೋಡ್‌ ನಲ್ಲಿ ಕಳೆದ ನಲವತ್ತು ವರ್ಷಗಳಿಂದ ಕುಲಕಸುಬುನ್ನು ಮಾಡುತ್ತಿದ್ದರು.
 
ಪತ್ನಿ ಶ್ರೀಮತಿ ಸುನಂದ ಆನಂದ ಭಂಡಾರಿ ಮಕ್ಕಳಾದ ಶ್ರೀಮತಿ ಉಷಾ ಶಂಕರ್  ಭಂಡಾರಿ  ಸುರತ್ಕಲ್ , ಶ್ರೀ  ಶೇಖರ್  ಭಂಡಾರಿ  ಕುತ್ಯಾರ್ , ಶ್ರೀಮತಿ  ನಳಿನಿ  ಆರ್. ಭಂಡಾರಿ  ಮುಂಬಯಿ, ಶ್ರೀ  ದಿನೇಶ್ ಭಂಡಾರಿ  ಮುಂಬಯಿ, ಶ್ರೀ  ಅಶೋಕ್ ಭಂಡಾರಿ ಬಿ.ಸಿ.ರೋಡ್‌ , ಶ್ರೀಮತಿ  ವಿನೋದ  ಅಶೋಕ್ ಭಂಡಾರಿ  ಮುಂಬಯಿ ಶ್ರೀಮತಿ ಸರೋಜ ಡಿ. ಭಂಡಾರಿ ಮುಂಬಯಿ ಹಾಗೂ ಅಳಿಯಂದಿರು, ಸೊಸೆಯಂದಿರು ಮೊಮ್ಮಕ್ಕಳು ಮತ್ತು  ಅಪಾರ ಸಂಖ್ಯೆಯ ಕುಟುಂಬ ವರ್ಗವನ್ನು ಅಗಲಿದ್ದಾರೆ.
 
ಮೃತರ ಮಕ್ಕಳಿಗೆ ಮತ್ತು ಬಂಧು ಬಳಗಕ್ಕೆ ನಿಧನದ  ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಿ ಭಗವಂತನ ಪಾದ ಸೇರಿದ ಇವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಭಂಡಾರಿ ಕುಟುಂಬದ  ಮನೆ ಮನದ ಮಾತು ಭಂಡಾರಿ ವಾರ್ತೆ ಶ್ರೀ ದೇವರಲ್ಲಿ ಪ್ರಾರ್ಥಿಸುತ್ತದೆ .
 
-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *