September 20, 2024
ಕುಂದಾಪುರ ಪ್ರಭಾತ್  ಹೇರ್ ಡ್ರೆಸಸ್ ಮಾಲಿಕ ಶ್ರೀ ಸಂಜೀವ ಭಂಡಾರಿ  (90 ವರ್ಷ) ಏಪ್ರಿಲ್‌  4 ರ ಶನಿವಾರದಂದು ರಾತ್ರಿ ವಯೋ ಸಹಜ ಆಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
 
  ಕುಂದಾಪುರದಲ್ಲಿ ಚಿರಪಚಿತರಾಗಿರುವ ಇವರು ಭಂಡಾರಿ ಸಮಾಜ ಸಂಘದ  ಅಭಿವೃದ್ಧಿಗಾಗಿ ಬಹಳಷ್ಟು ಶ್ರಮ ಪಟ್ಟಿದ್ದಾರೆ. ಸಮಾಜ ಸೇವೆಯ ತುಡಿತ ಮತ್ತು ದೈವ ಭಕ್ತಿ ಹೊಂದಿದ್ದ ಇವರು  ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ  ಆರಂಭದ ದಿನದಿಂದಲೂ  ಕಾರ್ಯಕರ್ತರಾಗಿ ದುಡಿದು ದೇವಸ್ಥಾನದ ಏಳಿಗೆಗಾಗಿ ಶ್ರಮಿಸಿದ್ದಾರೆ.
 
 
ಇವರ  ಪುತ್ರರಾದ ಶ್ರೀ  ನವೀನ್  ಭಂಡಾರಿ ಮಸ್ಕತ್ ಮತ್ತು ಶ್ರೀ ದಿನೇಶ್ ಭಂಡಾರಿ ಕುಂದಾಪುರ ಮತ್ತು ಪುತ್ರಿ ಶ್ರೀಮತಿ  ಶ್ರೀದೇವಿ  ವಸಂತ ಭಂಡಾರಿ  ಸುರತ್ಕಲ್, ಸಹೋದರಿಯರಾದ ಶ್ರೀಮತಿ ಗುಲಾಬಿ ದಾಸು ಭಂಡಾರಿ,  ಶ್ರೀಮತಿ ಶಾರದ ಆನಂದ ಭಂಡಾರಿ ಮತ್ತು ಸಹೋದರ ಶ್ರೀ ಪ್ರಭಾಕರ ಭಂಡಾರಿ ಪಳ್ಳಿ ಕಾರ್ಕಳ , ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ .
 
ದುಃಖತಪ್ತ ಮಕ್ಕಳಿಗೆ ಮತ್ತು ಕುಟುಂಬಕ್ಕೆ ಭಗವಂತನು ಅಗಲುವಿಕೆಯ ಶಕ್ತಿಯನ್ನು  ಕರುಣಿಸಲಿ ಎಂದು ಭಂಡಾರಿ ಕುಟುಂಬದ  ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.
 
 
-ಭಂಡಾರಿ ವಾರ್ತೆ
 

Leave a Reply

Your email address will not be published. Required fields are marked *