September 20, 2024

ಬಂಟ್ವಾಳ ಶ್ರೀ ದಿವಂಗತ ಸದಾಶಿವ ಭಂಡಾರಿ ಮತ್ತು ಶ್ರೀಮತಿ ಲೀಲಾವತಿ
ಸದಾಶಿವ ಭಂಡಾರಿ ದಂಪತಿಯ ಪುತ್ರ

ಶ್ರೀ ಜಗದೀಶ್ ಭಂಡಾರಿ

ಕಾಪು ತಾಲೂಕು ಪಣಿಯೂರು ಮಲಂಗೋಳಿ ಶ್ರೀ ದಿವಂಗತ ಕೃಷ್ಣ ಭಂಡಾರಿ ಮತ್ತು ಶ್ರೀಮತಿ ದಿವಂಗತ ಜಲಜ ಕೃಷ್ಣ ಭಂಡಾರಿ ದಂಪತಿಯ ಪುತ್ರಿ

ಶ್ರೀಮತಿ ಸುಜಾತಾ ಜಗದೀಶ್ ಭಂಡಾರಿ

ಇವರು ದಾಂಪತ್ಯ ಜೀವನದ ರಜತಮಹೋತ್ಸವದ ಸಂಭ್ರಮಾಚರಣೆಯನ್ನು ಮೇ 24 ನೇ ಆದಿತ್ಯವಾರದಂದು ಬಂಟ್ವಾಳದ ತಮ್ಮ ನಿವಾಸದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಶುಭ ಆಶೀರ್ವಾದಗಳೊಂದಿಗೆ ವಿಶಿಷ್ಟವಾಗಿ ಸರಳವಾಗಿ ಆಚರಿಸಿಕೊಂಡರು .

[sp_wpcarousel id=”9832″]

ಇವರ ಪುತ್ರರಾದ ಬೆಂಗಳೂರಿನ ವೈಟ್ ಫೀಲ್ಡ್ ಖಾಸಗಿ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಲಿಖಿತ್ ರಾಜ್ ಮತ್ತು ಬಂಟ್ವಾಳ ರಘುರಾಮ ಮುಕುಂದ ಪ್ರಭು ವಿದ್ಯಾ ಸಂಸ್ಥೆಯಲ್ಲಿ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಲಿಸ್ವಿತ್ ದಾಂಪತ್ಯ ಜೀವನದ ಸುಖ ಸಂಸಾರಕ್ಕೆ ಸಾಕ್ಷಿಯಾಗಿದ್ದಾರೆ .

ಶ್ರೀಮತಿ ಲೀಲಾವತಿ ಸದಾಶಿವ ಭಂಡಾರಿ ಬಂಟ್ವಾಳ ,
ಶ್ರೀ ಕಿಶೋರ್‍ ಮತ್ತು ರಾಜಶ್ರೀ ಕಿಶೋರ್‍ ದುಬೈ ,
ಶ್ರೀ ಸತೀಶ್ ಭಂಡಾರಿ ಮತ್ತು ಶೋಭಾ ಸತೀಶ್ ಬಂಟ್ವಾಳ ,
ಶ್ರೀ ದಿನೇಶ್ ಭಂಡಾರಿ ಮತ್ತು ಶ್ರೀಮತಿ ಶ್ವೇತಾ ದಿನೇಶ್ ಬಂಟ್ವಾಳ ,
ಶ್ರೀಮತಿ ಪವಿತ್ರ ಸುದೇಶ್ ಶ್ರೀ ಸುದೇಶ್ ಮೈಸೂರು ,
ಶ್ರೀ ರಾಜೇಶ್ ಭಂಡಾರಿ ಮತ್ತು ಸ್ವಾತಿ ರಾಜೇಶ್ ಬಂಟ್ವಾಳ ,
ಶ್ರೀ ಸುಧಾಕರ ಭಂಡಾರಿ ಮತ್ತು ಯಶೋಧ ಸುಧಾಕರ ಪಣಿಯೂರು ,
ಶ್ರೀ ಶಂಕರ್ ಭಂಡಾರಿ ಮತ್ತು ಶ್ರೀಮತಿ ಸುಜಾತಾ ಶಂಕರ್ ಮುಂಬಯಿ ,
ಶ್ರೀ ಪ್ರಭಾಕರ್ ಭಂಡಾರಿ ಮತ್ತು ಶ್ರೀಮತಿ ಆಶಾ ಪ್ರಭಾಕರ್ ಪಣಿಯೂರು ಶುಭ ಹಾರೈಸಿದ್ದರು .

ರಜತಮಹೋತ್ಸವದ ಆಚರಿಸಿದ ತಮ್ಮ ಮುಂದಿನ ದಾಂಪತ್ಯ ಜೀವನವು ನೂರಾರು ಕಾಲ ಸುಖ ಶಾಂತಿ ನೆಮ್ಮದಿಯ ಆರೋಗ್ಯವಂತ ಸಕಲ ಐಶ್ವರ್ಯದ ಜೀವನವನ್ನು ಸಾಗಿಸಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆಗಳು

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *