September 20, 2024
ಉಡುಪಿ ಜಿಲ್ಲೆ  ಬ್ರಹ್ಮಾವರ  ತಾಲೂಕು ಮೂಡ ಬಾರಳ್ಳಿಯ ಹೆಗ್ಗುಂಜೆ ಗ್ರಾಮದ  ಶ್ರೀ ದಿವಂಗತ ಪದ್ಮನಾಭ ಭಂಡಾರಿಯವರ ಪತ್ನಿ ಶ್ರೀಮತಿ ಜಲಜಾ ಭಂಡಾರಿಯವರು ದಿನಾಂಕ 30-06-2020 ಮಂಗಳವಾರದಂದು ಮಧ್ಯಾಹ್ನ 12-45ಕ್ಕೆ ಸ್ವಗೃಹದಲ್ಲಿ  ಹ್ರದಯಾಘಾತದಿಂದ  ದೈವಾಧೀನರಾದರು.
 
 
 
ಇವರಿಗೆ ಮೂರು ಮಂದಿ ಪುತ್ರರು ಹಾಗೂ ಮೂರು ಮಂದಿ ಪುತ್ರಿಯರಿದ್ದು , ಶ್ರೀಮತಿ ವೀಣಾ ವಸಂತ್ ಭಂಡಾರಿˌ ಬೆಂಗಳೂರು , ಶ್ರೀಮತಿ ಚಂಪಾ ನಾಗರಾಜ್ ಭಂಡಾರಿ ಮೂಡುಬಾರಳ್ಳಿ , ಶ್ರೀಮತಿ  ಪೂರ್ಣಿಮಾ ಉದಯ ಭಂಡಾರಿ ಹೆಗ್ಗೋಡು ,ಶ್ರೀ ರಮೇಶ್ ರೇವತಿ ಭಂಡಾರಿ ಹಿರೇಬೆಟ್ಟು , ಶ್ರೀಮತಿ ಉಮಾ ರತ್ನಾಕರ್ ಭಂಡಾರಿ ಬಸ್ರೂರು ,  ಶ್ರೀಮತಿ ಅಂಜನಾ ರವಿ ಭಂಡಾರಿ ಉಡುಪಿ  ಅಳಿಯಂದಿರು ಸೊಸೆಯಂದಿರು ಅಕ್ಕಂದಿರುˌ ಮೊಮ್ಮಕ್ಕಳು ಹಾಗೂ ಮರಿ ಮಕ್ಕಳನ್ನು ಅಗಲಿದ್ದಾರೆ. 
 
ಮೃತರ ಆತ್ಮಕ್ಕೆ   ಚಿರಶಾಂತಿಯನ್ನು ಕರುಣಿಸಿ ದುಃಖತಪ್ತ ಕುಟುಂಬಕ್ಕೆ ಅಗಲುವಿಕೆ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ  ಪ್ರಾರ್ಥಿಸುತ್ತದೆ .
 
 
-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *