September 20, 2024

ಬೆಂಗಳೂರು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಉದ್ಯೋಗಿಯಾಗಿರುವ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಶ್ರೀ ಗಜೇಂದ್ರ.ಎಸ್.ಭಂಡಾರಿ ಮತ್ತು ಶ್ರೀಮತಿ ಸುಪ್ರಿಯಾ ಗಜೇಂದ್ರ ಭಂಡಾರಿ ದಂಪತಿಯು ತಮ್ಮ ಪುತ್ರಿ ಆದ್ಯ .ಜಿ. ಭಂಡಾರಿ

ಯವರ ಐದನೇ ವರ್ಷದ ಹುಟ್ಟು ಹಬ್ಬವನ್ನು ನವೆಂಬರ್ 29, 2018 ರ ಗುರುವಾರ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.



ಚಿಕ್ಕಮಗಳೂರಿನ ಸೇಂಟ್ ಕ್ಸೇವಿಯರ್ ಸ್ಕೂಲ್ ನಲ್ಲಿ ಯುಕೆಜಿ ಕಲಿಯುತ್ತಿರುವ ಆದ್ಯ ಶಾಲೆಯಲ್ಲಿ ತನ್ನ ಸ್ನೇಹಿತರೊಂದಿಗೆ ಹುಟ್ಟು ಹಬ್ಬವನ್ನು ಸಂತಸದಿಂದ ಆಚರಿಸಿಕೊಂಡಳು. 

ಆದ್ಯಳಿಗೆ ಅವರ ತಂದೆ, ತಾಯಿ, ಅಜ್ಜ ಶ್ರೀ ಸುಂದರ ಭಂಡಾರಿ, ಅಜ್ಜಿ  ಶ್ರೀಮತಿ ವಿಜಯಲಕ್ಷ್ಮಿ ಸುಂದರ ಭಂಡಾರಿ, ಕಾರ್ಕಳದ ಅಜ್ಜಿ ವಾರಿಜ ಭಂಡಾರಿ, ಶ್ರೀಮತಿ ಉಷಾ ಮನೋರಾಜ್.ಮಂಗಳೂರು, ಶ್ರೀಮತಿ ಶುಭ ಪ್ರಸನ್ನ ಮೈಸೂರು, ಶ್ರೀಮತಿ ರೂಪಾ ಅರವಿಂದ್. ಭದ್ರಾವತಿ, ಶ್ರೀಮತಿ ಸುಕನ್ಯಾ ದಿನೇಶ್.ಮಂಚೆಕಲ್ ಮತ್ತು ಪುಟಾಣಿಗಳಾದ ಕುಮಾರಿ ದಿಯಾ, ಮಾಸ್ಟರ್ ದೈವಿಕ್, ಮಾಸ್ಟರ್ ಸುದರ್ಶನ್, ಮಾಸ್ಟರ್ ದಿಶಾನ್ ಹಾಗೂ ಬಂಧುಮಿತ್ರರು ಮತ್ತು ಸಹಪಾಠಿಗಳು ಶುಭ ಹಾರೈಸಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಆದ್ಯಳಿಗೆ ಭಗವಂತನು ಆಯುರಾರೋಗ್ಯವನ್ನಿತ್ತು, ವಿದ್ಯಾಬುದ್ಧಿಯನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಕೋರುತ್ತದೆ.

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *