September 20, 2024
ಬೆಳ್ತಂಗಡಿ ನೆಲ್ಯಾಡಿಯ ಶ್ರೀಮತಿ ರುಕ್ಮಿಣಿ ಭಂಡಾರಿಯವರ ಪತಿ ಶ್ರೀ ನಾರಾಯಣ ಭಂಡಾರಿ ಅಳಕೆಯವರು ಅಲ್ಪಕಾಲದ ಅಸೌಖ್ಯದಿಂದ ನವೆಂಬರ್ 5,2018 ರ ಸೋಮವಾರ ಸಂಜೆ 7 ಗಂಟೆಗೆ ನಿಧನ ಹೊಂದಿದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಶ್ರೀ ನಾರಾಯಣ ಭಂಡಾರಿಯವರಿಗೆ ಮೂವರು ಗಂಡು, ಇಬ್ಬರು ಹೆಣ್ಣು ಮಕ್ಕಳು.ಪ್ರಸ್ತುತ ದೂರದ ಕತಾರ್ ನಲ್ಲಿ ನೆಲೆಸಿರುವ ಭಂಡಾರಿವಾರ್ತೆಯ ಪ್ರಚಾರ ವಿಭಾಗದ ಮುಖ್ಯಸ್ಥ  ಶ್ರೀಪಾಲ್ ಭಂಡಾರಿಯವರ ತಾಯಿ ದಿವಂಗತ ಸುಜಾತ ಭಂಡಾರಿಯವರು ಇವರ ಮಗಳಲ್ಲೊಬ್ಬರು.
ಮೃತರು ಮಕ್ಕಳು,ಮೊಮ್ಮಕ್ಕಳು,ಮರಿಮಕ್ಕಳು,ಸೊಸೆಯಂದಿರು,ಅಳಿಯಂದಿರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ನಾರಾಯಣ ಭಂಡಾರಿಯವರ ನಿಧನದಿಂದ ದುಃಖದಲ್ಲಿರುವ ಕುಟುಂಬಸ್ಥರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಮತ್ತು ಶ್ರೀ ದೇವರು ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.
ಮೃತರ ಅಂತ್ಯಕ್ರಿಯೆಯು   ನವೆಂಬರ್ 6 ರಂದು ಬೆಳಿಗ್ಗೆ10 ಗಂಟೆಗೆ  ಕೊಕ್ಕಡದಲ್ಲಿರುವ ದಿವಂಗತರ ಕುಟುಂಬದ ಮನೆಯಲ್ಲಿ ನೆರವೇರಲಿದೆಯೆಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ . 
ಭಂಡಾರಿವಾರ್ತೆ

Leave a Reply

Your email address will not be published. Required fields are marked *