September 20, 2024

ದೇವಕಿಯ ಎಂಟನೇ ಕಂದ.
ಮಾವ ಕಂಸನ ವಧೆಗೆಂದು ಬಂದ,
ನೂರೆಂಟು ನಾಮಧೇಯದ ಮುಕುಂದ.

ಎನ್ನ ಮನದಲಿರುವ ನೋವ ಕೇಳಿ..
ನುಡಿಸುವೆಯ ನೀ ಗಾನ ಮುರಳಿ?
ಸುಖದಿ ತೇರನೇರುವೆ ನಾ ಮರಳಿ.

ಭಕ್ತಿಯಿಂದ ನಿನ್ನ ಬಳಿ ಬಂದೆ,
ಕಷ್ಟ ದಾರಿಯಲಿ ಕೈ ಹಿಡಿಯೋ ತಂದೆ!
ನೆರಳಿನ ಹಾಗೆ ಎಂದೆಂದಿಗೂ ಇರು ಬೆನ್ನ ಹಿಂದೆ!!

ಗರಿ ಬಿಚ್ಚಿ ಕುಣಿದಾಡುವುದು ಈ ಮನವು..
ತೋರುಲು ನೀ ಎನಗೆ ವಿಶೇಷ ಒಲವು,
ಬದುಕಿನಲಿ ನನಗದುವೇ ಶ್ರೇಷ್ಠ ಗೆಲುವು.

ಕೊಳಲಿನಂತೆ ನಾ ಆಗಲು ಶರಣಾಗತಿ
ಎನ್ನ ಮನ ಬಯಸುತಿದೆ ಗೋಪಿಕಾಪತಿ
ಜೀವನದಲ್ಲಿ ಮೀರಲಾರೆ ನಿನ್ನ ಆಣತಿ.

ಅರ್ಜುನನಿಗೆ ನೀಡುತ ಉಪದೇಶ..
ಸಾರಿದೆ ಭಗವದ್ಗೀತೆಯಲಿ ಸಂದೇಶ,
ಅರಿತುಕೊಳ್ಳಲು ಬದುಕಿನ ಸದುದ್ದೇಶ.

 

 

 

 

✍️ ಪ್ರಕೃತಿ ಭಂಡಾರಿ ಆಲಂಕಾರು

Leave a Reply

Your email address will not be published. Required fields are marked *