September 20, 2024

ಓಂ ಶ್ರೀ ಭಗವತೇ ವಾಸುದೇವಯ ನಮೋ :

ಭಗವದ್ಗೀತೆಯು ಶ್ರೀ ಕೃಷ್ಣನು ಅರ್ಜುನನಿಗೆ ಹೇಳುವ ಉಪದೇಶ. ಗೀತೆಯ ಪ್ರತಿ ಅಧ್ಯಾಯದಲ್ಲಿ ಮೌಲ್ಯದ ಸಂದೇಶವಿದೆ..

 

ಗೀತಾ ಸಾರ:
ಆದುದೆಲ್ಲ ಒಳ್ಳೆಯದಕ್ಕೆ
ಆಗುವುದೆಲ್ಲ ಒಳ್ಳೆಯದೇ ಆಗುತ್ತಿದೆ
ಆಗಲಿರುವುದೂ ಸಹ ಒಳ್ಳೆಯದೇ ಆಗಲಿದೆ
ರೋದಿಸಲು ನೀನೇನು ಕಳೆದುಕೊಂಡಿರುವೆ..
ಕಳೆದುಕೊಳ್ಳಲು ನೀನು ತಂದಿರುವುದಾದರು ಏನು..
ನಾಶವಾಗಲು ನೀನು ಮಾಡಿರುವದಾದರು ಏನು..
ನೀನೇನು ಪಡೆದಿದ್ದರು ಅದನ್ನು ಇಲ್ಲಿಂದಲೇ ಪಡಿದಿರುವೆ..
ನೀನು ಏನನ್ನೂ ನೀಡಿದ್ದರೂ ಅದನ್ನು ಇಲ್ಲಿಗೆ ನೀಡಿರುವೆ..
ನಿನ್ನೆ ಬೇರಾರದೋ ಆಗಿದ್ದು ಇಂದು ನಿನ್ನದಾಗಿದೆ ಮತ್ತು ನಾಳೆ ಇನ್ನಾರದ್ದೋ ಆಗಲಿದೆ..

 

ಪರಿವರ್ತನೆ ಜಗದ ನಿಯಮ..

ಬದಲಾಗುವ ಕಾಲದ ಜೊತೆ ..ಇರುವುದರಲ್ಲೇ ತೃಪ್ತಿ ಪಟ್ಟುಕೊಂಡು.. ಇನ್ಯಾರಿಗೂ ಕೇಡು ಮಾಡದೆ..ಮನುಷ್ಯ ಜನ್ಮವನ ಕೃಷ್ಣ ನೀಡಿರುವ ಸಂದೇಶಗಳ ಪಾಲಿಸುವ ಮುಖೇನ ಸಾರ್ಥಕಗೊಳಿಸಿಕೋಲ್ಲೋಣ..

ಇರುವತನಕ ಆತ್ಮವಾದರು ನಮ್ಮ ಮೆಚ್ಚುವ ಹಾಗೇ ಬದುಕಲು ಪ್ರಯತ್ನ ಪಡೋಣ..🙏

ಭರತ್ ರಾಜ್ ಭಂಡಾರಿ 😍
ಉಜಿರೆ.

Leave a Reply

Your email address will not be published. Required fields are marked *