
ಕಾರ್ಕಳ ತಾಲೂಕು ಆಫೀಸು ಬಳಿಯ ಶ್ರೀ ಶೇಖರ್.ಹೆಚ್.ಭಂಡಾರಿ ಮತ್ತು ಶ್ರೀಮತಿ ವನಿತಾ ಶೇಖರ್ ಭಂಡಾರಿ ದಂಪತಿಗಳ ಪುತ್ರ…
ಚಿ|| ವೈಶಾಖ್.ಕೆ.
ಹಾಗೂ ಮಂಗಳೂರು ತಾಲೂಕು ಕುಳಾಯಿ ಕೋಡಿಕೆರೆ ಶ್ರೀ ಸದಾಶಿವ ಭಂಡಾರಿ ಮತ್ತು ಶ್ರೀಮತಿ ಉಷಾ.ಎಸ್.ಭಂಡಾರಿ ದಂಪತಿಗಳ ಪುತ್ರಿ…
ಚಿ||ಸೌ|| ಜಯಶ್ರೀ.
ಇವರ ಶುಭ ವಿವಾಹವು ಜನವರಿ 18,2019 ರ ಶುಕ್ರವಾರ ಸುರತ್ಕಲ್ “ಬಂಟರ ಭವನ” ದಲ್ಲಿ ಬಂಧುಮಿತ್ರರು, ಕುಟುಂಬಸ್ಥರು, ಹಿತೈಷಿಗಳು ಹಾಗೂ ಸಹೋದ್ಯೋಗಿಗಳ ಶುಭ ಆಶೀರ್ವಾದೊಂದಿಗೆ ಬಹಳ ವಿಜೃಂಭಣೆಯಿಂದ ನೆರವೇರಿತು.
ನವ ದಂಪತಿಗಳಿಗೆ ಭಗವಂತನು ಪ್ರೀತಿ, ವಿಶ್ವಾಸ , ಸುಖ, ಶಾಂತಿ, ನೆಮ್ಮದಿಯ ಬದುಕನ್ನು ಕಲ್ಪಿಸಿ ಆರೋಗ್ಯ ಆಯುಷ್ಯ ಸಕಲ ಐಶ್ವರ್ಯವನ್ನು ಕರುಣಿಸಿ ಚಿರಕಾಲ ಅನೂನ್ಯತೆಯಿಂದ ಬಾಳಿ ಬದುಕಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯು ಹಾರ್ದಿಕವಾಗಿ ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ.”