September 20, 2024

ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಶ್ರೀ ಜಗದೀಶ್ ಭಂಡಾರಿ  ಮತ್ತು ಶ್ರೀಮತಿ ಮೋಹಿನಿ ಜಗದೀಶ್ ಭಂಡಾರಿಯವರ ಪುತ್ರ ಶ್ರೀ ಪ್ರಣಾಮ್ ಕುಮಾರ್ ಭಂಡಾರಿಯವರು ತಮ್ಮ ಮೂವತ್ತನೇ ವರ್ಷದ ಹುಟ್ಟು ಹಬ್ಬವನ್ನು  ಮಾರ್ಚ್ 9 ರ ಶುಕ್ರವಾರದಂದು ಸಂಭ್ರಮ ಸಡಗರದಿಂದ ಆಚರಿಸಿಕೊಂಡರು.

ಈ ಶುಭ ಸಂದರ್ಭದಲ್ಲಿ ತಂದೆ, ತಾಯಿ, ಅಣ್ಣ ಶ್ರೀ ಪವನ್ ಕುಮಾರ್ ಭಂಡಾರಿ, ಅತ್ತಿಗೆ ಶ್ರೀಮತಿ ಅಕ್ಷತಾ ಪವನ್ ಕುಮಾರ್ ಭಂಡಾರಿ, ಕು॥ ತನಿಷ್ಕ ಪವನ್ ಕುಮಾರ್,ಕುಟುಂಬಸ್ಥರು ಬಂಧು ಮಿತ್ರರು ಹಾಗೂ ಸಹೋದ್ಯೋಗಿಗಳು ಶುಭ ಹಾರೈಸಿದರು.
ಶ್ರೀ ಪ್ರಣಾಮ್ ಕುಮಾರ್ ರವರು ವಿಜಯ ಬ್ಯಾಂಕ್ ನಲ್ಲಿ  ಕಳೆದ ಏಳು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.ವಿಜಯ ಬ್ಯಾಂಕ್ ಅಧಿಕಾರಿಯಾಗಿ ಸೋಮವಾರ ಪೇಟೆ ಅಬ್ಬರ್ ಕಟ್ಟೆ ಶಾಖೆಯಲ್ಲಿ  ಅಧಿಕಾರ ಸ್ವೀಕಾರ ಮಾಡಿದ ಇವರು ನಂತರ ಮಡಿಕೇರಿ ಶಾಖೆಗೆ ವರ್ಗಾವಣೆಗೊಂಡರು.ಇವರ ಪ್ರಾಮಾಣಿಕ ಸೇವೆ ಗುರುತಿಸಿ ಬ್ಯಾಂಕ್ ಮ್ಯಾನೇಜರ್ ಹುದ್ದೆಗೆ ಬಡ್ತಿ ನೀಡಿ ಬಂಟ್ವಾಳ ತಾಲ್ಲೂಕು  ಸರಪಾಡಿ ಶಾಖೆಯಲ್ಲಿ  ಸೇವೆಗೆ ನಿಯುಕ್ತಿಗೊಳಿಸಲಾಯಿತು.ಪ್ರಸ್ತುತ ಸೋಮವಾರ ಪೇಟೆ ಅಬ್ಬುರ್ ಕಟ್ಟೆ ಶಾಖೆಯ ಮ್ಯಾನೇಜರ್ ಆಗಿ ಕಾರ್ಯ  ನಿರ್ವಹಿಸುತ್ತಿದ್ದು ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಶ್ರೀ ಪ್ರಣಾಮ್ ಕುಮಾರ್ ಭಂಡಾರಿಯವರಿಗೆ ಭಗವಂತನು ಆಯುರಾರೋಗ್ಯ ಐಶ್ವರ್ಯಗಳನ್ನು ನೀಡಿ ಹರಸಲಿ,ನಿಮ್ಮ ವೃತ್ತಿ ಬದುಕು ಯಶಸ್ವಿಯಾಗಿ ಇನ್ನಷ್ಟು ಎತ್ತರಕ್ಕೇರಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.

–ಭಂಡಾರಿವಾರ್ತೆ

Leave a Reply

Your email address will not be published. Required fields are marked *