September 20, 2024

ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಶ್ರೀ ಜಗದೀಶ್ ಭಂಡಾರಿಯವರು ತಮ್ಮ ಐವತ್ತೊಂಬತ್ತನೇ ವರ್ಷದ ಹುಟ್ಟು ಹಬ್ಬವನ್ನು  ಏಪ್ರಿಲ್ 2 ರ ಸೋಮವಾರ ಸಂಭ್ರಮ ಸಡಗರದಿಂದ ಆಚರಿಸಿಕೊಳ್ಳುತ್ತಿದ್ದಾರೆ.

 
 ಈ ಶುಭ ಸಂದರ್ಭದಲ್ಲಿ ಪತ್ನಿ ಶ್ರೀಮತಿ ಮೋಹಿನಿ ಜಗದೀಶ್ ಭಂಡಾರಿ, ಪುತ್ರರಾದ ಶ್ರೀ ಪವನ್ ಕುಮಾರ್ ಭಂಡಾರಿ, ಮತ್ತು ಶ್ರೀ  ಪ್ರಣಾಮ್ ಕುಮಾರ್ ಭಂಡಾರಿ, ಸೊಸೆ  ಶ್ರೀಮತಿ ಅಕ್ಷತಾ ಪವನ್ ಕುಮಾರ್ ಭಂಡಾರಿ, ಮೊಮ್ಮಗಳು ಕು॥ ತನಿಷ್ಕ ಪವನ್ ಕುಮಾರ್, ಹಾಗೂ   ಕುಟುಂಬಸ್ಥರು,ಹಿತೈಷಿಗಳು ಮತ್ತು ಬಂಧು ಮಿತ್ರರು ಶುಭ ಹಾರೈಸುತ್ತಿದ್ದಾರೆ.

ಶ್ರೀ ಜಗದೀಶ್ ಭಂಡಾರಿಯವರು ರಾಜಕೀಯ ಮತ್ತು ಸಾಮಾಜಿಕ  ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಭಾರತೀಯ ಜನತಾಪಕ್ಷದ  ಕೊಣಾಜೆ ಶಕ್ತಿ ಕೇಂದ್ರದ  ಅಧ್ಯಕ್ಷರಾಗಿ ಮಂಗಳೂರು ಆರಾಧನಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಸದಸ್ಯರಾಗಿದ್ದಾರೆ. ಮಂಗಳೂರು ತಾಲ್ಲೂಕು ಪಂಚಾಯತ್ ಚುನಾವಣೆಗೆ  ಕೊಣಾಜೆ ಕ್ಷೇತ್ರ ದಿಂದ  ಸ್ಪರ್ಧಿಸಿದ್ದಾರೆ.ಮಂಗಳೂರು ಮಂಗಳ ಗಂಗೋತ್ರಿಯ ಜೆ.ಸಿ. ಸಂಸ್ಥೆಯಿಂದ ಸಾಧನಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೀಗೆ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.

 

ಇವರ ಸಮಾಜ ಸೇವೆ ನಿರಂತರವಾಗಿ ಮುಂದುವರಿಯಲಿ, ರಾಜಕೀಯ ಕ್ಷೇತ್ರದಲ್ಲಿ ಇನ್ನೂ ಉತ್ತಮ ಮಟ್ಟಕ್ಕೆ ಏರಲಿ ಎಂದು ಹಾರೈಸುತ್ತಾ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಶ್ರೀ ಜಗದೀಶ್  ಭಂಡಾರಿಯವರಿಗೆ ಭಗವಂತನು ಆಯುರಾರೋಗ್ಯ ಐಶ್ವರ್ಯಗಳನ್ನು ನೀಡಿ ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.

-ಭಂಡಾರಿವಾರ್ತೆ

Leave a Reply

Your email address will not be published. Required fields are marked *