September 20, 2024
ಉಡುಪಿ ತಾಲ್ಲೂಕು ಎಲ್ಲೂರು ಶ್ರೀ ವೈ.ಎನ್ ತಿಮ್ನಪ್ಪ ಭಂಡಾರಿ ಮತ್ತು ಶ್ರೀಮತಿ ರಾಧ ತಿಮ್ಮಪ್ಪ ಭಂಡಾರಿ ದಂಪತಿಗಳ ಪುತ್ರಿ ಹಾಗೂ ನವ ಮಂಗಳೂರು ಬಂದರು ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ರಮೇಶ್ ಭಂಡಾರಿ ಬೊಟ್ಯಾಡಿಯವರ ಪತ್ನಿ ಶ್ರೀಮತಿ ಶ್ರೀವನಿತಾ ರಮೇಶ್ ಭಂಡಾರಿಯವರು ತಮ್ಮ ಹುಟ್ಟು ಹಬ್ಬವನ್ನು ಸುರತ್ಕಲ್ ನ ತಮ್ಮ ನಿವಾಸದಲ್ಲಿ ಏಪ್ರಿಲ್‌ 6 ರ ಶುಕ್ರವಾರ ಸಡಗರ  ಸಂಭ್ರಮದಿಂದ  ಆಚರಿಸಿಕೊಂಡರು.
ಈ ಶುಭ ಸಂದರ್ಭದಲ್ಲಿ ಶ್ರೀಮತಿ ವನಿತಾ ರಮೇಶ್ ಭಂಡಾರಿಯವರ ತಂದೆ, ತಾಯಿ, ಪತಿ ಹಾಗೂ ಪುತ್ರರಾದ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀ ಬ್ರಿಜೇಶ್ ಭಂಡಾರಿ ಮತ್ತು ಪಣಂಬೂರು ಕೇಂದ್ರೀಯ ವಿದ್ಯಾಲಯದಲ್ಲಿ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಾಸ್ಟರ್ ಭವಿಷ್ಯ ಭಂಡಾರಿ ಹಾಗೂ ಕುಟುಂಬಸ್ಥರು ಮತ್ತು ಬಂಧು ಮಿತ್ರರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಶ್ರೀಮತಿ ವನಿತಾರವರು ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇವರ ವೃತ್ತಿ ಜೀವನದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಿ ಉನ್ನತ ಸ್ಥಾನಕ್ಕೇರಲಿ ಎಂದು ಶುಭ ಹಾರೈಸುತ್ತಾ ಭಗವಂತನು ಅವರಿಗೆ ಆಯುರಾರೋಗ್ಯ ಸುಖ ಶಾಂತಿ ಐಶ್ವರ್ಯಗಳನ್ನು ನೀಡಿ ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ  ಮಾತ”ಭಂಡಾರಿ ವಾರ್ತೆ” ಶುಭ ಹಾರೈಸುತ್ತದೆ. 
-ಭಂಡಾರಿ ವಾತೆ೯

Leave a Reply

Your email address will not be published. Required fields are marked *