
ಬೆಳ್ತಂಗಡಿಯ ಕೊಂಡೆಟ್ಟುವಿನ ಶ್ರೀ ಮಧುಸೂದನ್ ಭಂಡಾರಿ ಮತ್ತು ಶ್ರೀಮತಿ ರೂಪಿಕಾ ಮಧುಸೂದನ್ ಭಂಡಾರಿ ದಂಪತಿಗಳು ತಮ್ಮ ಮುದ್ದಿನ ಮಗ “ಮಾಸ್ಟರ್ ಅಧ್ವಿಕ್” ನ ಮೂರನೇ ವರ್ಷದ ಹುಟ್ಟು ಹಬ್ಬವನ್ನು ಮಾರ್ಚ್ 31 ರ ಶನಿವಾರ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ ವರ್ಕಾಡಿ ಚಾವಡಿಬೈಲಿನ ಅಜ್ಜ ಅಜ್ಜಿ ಶ್ರೀ ಧರ್ಮರಾಜ್ ಭಂಡಾರಿ ಮತ್ತು ಶ್ರೀಮತಿ ಮೂಕಾಂಬಿಕಾ ಧರ್ಮರಾಜ್ ಭಂಡಾರಿ,ಚಿಕ್ಕಮ್ಮಂದಿರು ,ಮಾವ ಮತ್ತು ಅಜ್ಜ ಅಜ್ಜಿಯಂದಿರು , ಹಿತೈಷಿಗಳು ಶುಭ ಹಾರೈಸಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮಾಸ್ಟರ್ ಅಧ್ವಿಕ್ ಮಧುಸೂದನ್ ಭಂಡಾರಿಯವರಿಗೆ ಭಗವಂತನು ಆಯುರಾರೋಗ್ಯ ಭಾಗ್ಯ ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಹಾರೈಸುತ್ತಾ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ