September 20, 2024
ಹೊಸದಿಲ್ಲಿಯ ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯು ನಡೆಸಿದ  CAಅಂತಿಮ ಪರೀಕ್ಷೆಯ ರಾಷ್ಟ್ರಮಟ್ಟದಲ್ಲಿ 35  ನೇ  Rankಗಳಿಸಿದ  ಪಡುಬಿದ್ರೆಯ ಶ್ರೀಕಾಂತ್  ಭಂಡಾರಿ   ಭಂಡಾರಿ ಸಮಾಜದ ಹಿರಿಮೆಗೆ  ಪಾತ್ರರಾಗಿದ್ದಾರೆ  ಪಡುಬಿದ್ರಿ ಲಯನ್ಸ್ ಶಿಕ್ಷಣ ಸಂಸ್ಥೆಯಲ್ಲಿ ಮತ್ತು ತೋಕುರು ಎಮ್ . ಆರ್. ಎಸ್‌ .ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು  ಮಣಿಪಾಲದ ಎಮ್  .ಜಿ . ಎಮ್   . ಶಿಕ್ಷಣ ಸಂಸ್ಥೆಯಲ್ಲಿ     ಹೈಸ್ಕೂಲ್ ವಿದ್ಯಾಭ್ಯಾಸ ಪಡೆದು    ಅದಮಾರು ಪೂರ್ಣಪ್ರಜ್ಞ ಕಾಲೇಜಿನಲ್ಲಿ   ಅತ್ಯುತ್ತಮ ಅಂಕದೊಂದಿಗೆ  ಪಿ.ಯು.ಸಿ. ಶಿಕ್ಷಣ  ಪಡೆದಿದ್ದಾರೆ. ಮಂಗಳೂರಿನ ಮಣ್ಣಗುಡ್ಡೆ ಪ್ರೇಮ ಕ್ರಾಂತಿ  ಕಾಲೇಜಿನಲ್ಲಿ ಪದವಿ ವ್ಯಾಸಂಗವನ್ನು ಪಡೆದು  ಉಡುಪಿಯ  ತ್ರಿಷಾ ಇನ್ಸ್ಟಿಟ್ಯೂಟ್ ಶಿಕ್ಷಣ ಸಂಸ್ಥೆಯಲ್ಲಿ   ಹಾಗೂ ಬೆಂಗಳೂರನಲ್ಲಿ  ಸಿ . ಎ . ಶಿಕ್ಷಣವನ್ನು  ಪಡೆದಿದ್ದಾರೆ.
 
 
ಬೆಂಗಳೂರಿನ  ಚಾರ್ಟರ್ಡ್ ಅಕೌಂಟೆಂಟ್ ಗಳಾದ ಈಶ್ವರ್ ಅಂಡ್ ಗೋಪಾಲ್  ಅವರಲ್ಲಿ  ತರಬೇತಿ ಪಡೆದಿರುವ  ಶ್ರೀಕಾಂತ್  ಭಂಡಾರಿ  ಪಡುಬಿದ್ರೆ ಡೆಂಗ್ರೆ ಏಳನೇ  ವಾರ್ಡಿನ  ಶ್ರೀ ಕರುಣಾಕರ ಭಂಡಾರಿ ಮತ್ತು ಶ್ರೀಮತಿ ಶೋಭಾ ಕರುಣಾಕರ ಭಂಡಾರಿ  ದಂಪತಿಯ ಸುಪುತ್ರ. ಸಹೋದರಿ ಕು ॥ ಜ್ಯೋತಿ ಕೆ ಭಂಡಾರಿ  ಬಿ ಫಾರ್ಮಾ  ಶಿಕ್ಷಣ ಪಡೆದು ಖಾಸಗಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
 
 
    ಶ್ರೀಕಾಂತ್ ಭಂಡಾರಿ ಯವರ ಸಾಧನಗೆ  ಶುಭ ಹಾರೈಸುತ್ತಾ ,ಇವರು  ಇನ್ನಷ್ಟು ಸಾಧನೆ ಮಾಡಿ  ಭಂಡಾರಿ ಸಮಾಜದಲ್ಲಿ ಹಾಗೂ  ರಾಷ್ಟ್ರಮಟ್ಟದಲ್ಲಿ ಗುರುತಿಸಿ ಕೊಳ್ಳಲು  ಭಗವಂತನ  ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ  ಮನೆ ಮನದ ಮಾತು ಭಂಡಾರಿ  ವಾರ್ತೆಯು ದೇವರಲ್ಲಿ ಬೇಡುತ್ತದೆ.
 
 
ಇವರ ಈ ಅಭೂತಪೂರ್ವ ಸಾಧನೆಗೆ ಶುಭ ಹಾರೈಸುವವರು ಈ ಕೆಳಗಿನ ಸಂಖ್ಯೆಗೆ ಸಂಪರ್ಕಿಸಬಹುದು.
 
ಸಂಪರ್ಕ ಸಂಖ್ಯೆ:
 
ಶ್ರೀಮತಿ ಶೋಭಾ ಕರುಣಾಕರ ಭಂಡಾರಿ 
ಪಡುಬಿದ್ರೆ
ದೂರವಾಣಿ ಸಂಖ್ಯೆ 
9964602397
 
– ಭಂಡಾರಿ ವಾರ್ತೆ
 
 
 

Leave a Reply

Your email address will not be published. Required fields are marked *