September 20, 2024

ಕಬ್ಬಿಣಾಂಶ ಹೆಚ್ಚಿಸಲು ಮಾತ್ರೆ ಬೇಡ, ತಜ್ಞರು ಸೂಚಿಸಿರುವ ಈ ಆಹಾರಗಳನ್ನು ಸೇವಿಸಿ

ಕಬ್ಬಿಣದ ಅಂಶದ ಕೊರತೆ ಕಂಡು ಬಂದರೆ, ವೈದ್ಯರು ನೀಡುವ ಮಾತ್ರೆಗಳು ಮಾತ್ರ ಸಾಲದು, ಬದಲಿಗೆ ಕಬ್ಬಿಂಣಾಂಶ ಹೆಚ್ಚಾಗಿರುವ ಆಹಾರಗಳನ್ನು ಕೂಡ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು

ಬೆಳಗ್ಗೆ ಎದ್ದಾಗ ಚೆನ್ನಾಗಿಯೇ ಇರುತ್ತೇವೆ, ಆದರೆ ಸ್ವಲ್ಪ ಹೊತ್ತಿನಲ್ಲೇ ಮೈ ಬೆವರಲು ಶುರುವಾಗುತ್ತದೆ! ಇದ್ದಕ್ಕಿದಂತೆ ದೇಹದಲ್ಲಿ ತುಂಬಾನೇ ಆಯಾಸ ಕಾಣಿಸಿಕೊಳ್ಳುತ್ತದೆ, ಇಲ್ಲಾಂದ್ರೆ ನಿಂತು ನಡೆಯಲು ಶುರು ಮಾಡಿದರೆ, ತಲೆಸುತ್ತು ಬಂದಂತೆ ಆಗುತ್ತದೆ, ಅಲ್ಲದೆ ದೇಹದಲ್ಲಿ ರಕ್ತದ ಕೊರತೆ ಇದೆ ಎನ್ನುವ ಎಲ್ಲಾ ಲಕ್ಷಣಗಳು ಕೂಡ ಎದ್ದು ಕಾಣಿಸುತ್ತದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ, ಇವೆಲ್ಲವೂ ಕೂಡ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಆಗಿರಬಹುದು ಎಂದು ತಿಳಿಸುವ ರೋಗ ಲಕ್ಷಣಗಳು. ಇಂತಹ ಸಮಸ್ಯೆಗಳಿಗೆ ವೈದ್ಯರು ಐರನ್ ಫೋಲೇಟ್ ಮಾತ್ರೆಗಳನ್ನು ತಿನ್ನಲು ಹೇಳಿ ಸರಿಪಡಿಸುತ್ತಾರೆ.

ಆದರೆ ಇದೆಲ್ಲಾ ತಾತ್ಕಾಲಿಕ ಪರಿಹಾರ ಅಷ್ಟೇ! ಹೀಗಾಗಿ ಇಂತಹ ಸಮಸ್ಯೆಗಳು ಬರಬಾರದೆಂದರೆ, ಕಬ್ಬಿಣಾಂಶ ಪ್ರಮಾಣ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸ ಬೇಕು. ಹಾಗಾದ್ರೆ ಅಂತಹ ಆಹಾರಗಳು ಯಾವುದು ಎನ್ನುವುದರ ಬಗ್ಗೆ ಆಯುರ್ವೇದ ತಜ್ಞರಾದ ಡಾ. ದೀ ಭಾ ಸ ಅವರು ಹಂಚಿಕೊಂಡಿರುವ ಆಹಾರಗಳ ಬಗ್ಗೆ ನೋಡೋಣ..

ಕಬ್ಬಿಣಂಶ ಹೆಚ್ಚಿಸುವ ಟಾಪ್‌ ಆಹಾರಗಳು

ಎಳ್ಳು ಬೀಜಗಳು

  • ಎಳ್ಳು ಬೀಜಗಳು ನೋಡಲು ಸಣ್ಣಗೆ ಇದ್ದರೂ ಕೂಡ ಆರೋ ಗ್ಯಕ್ಕೆ ಬಹಳ ಒಳ್ಳೆಯದು ಎನ್ನುವುದು ಹಲವು ಬಾರಿ ಸಾಬೀ ತಾಗಿದೆ.
  • ಪ್ರಮುಖವಾಗಿ ಈ ಪುಟ್ಟ ಬೀಜಗಳಲ್ಲಿ ವಿಟಮಿನ್ ಬಿ6, ಥೈಮೇನ್ ನಿಯಾಸಿನ್, ತಾಮ್ರ, ಜಿಂಕ್, ಸೆಲೆನಿಯಮ್ ಮೆಗ್ನಿಶಿಯಂ, ಕಬ್ಬಿಣಾಂಶ ಮತ್ತು ಪಾಸ್ಪರಸ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.
  • ಹೀಗಾಗಿ ಕಬ್ಬಿಣಾಂಶದ ಕೊರತೆ ಎದುರಿಸುವವರು ಇದರ ಜ್ಯೂಸ್ ಮಾಡಿಕೊಂಡು ಕುಡಿಯಬಹುದು ಇಲ್ಲಾಂದ್ರೆ ಹಸಿ ಅಥವಾ ಹುರಿದು ತಿನ್ನಬಹುದು. ಇಲ್ಲಾಂದ್ರೆ ಶುದ್ಧ ತುಪ್ಪದ ಜೊತೆಗೆ ಮಿಶ್ರಣ ಮಾಡಿ ಉಂಡೆಗಳನ್ನಾಗಿ ಮಾಡಿಕೊಂಡು, ದಿನದಲ್ಲಿ ಎರಡು-ಮೂರು ಮಾರಿ ಸೇವಿಸಬಹುದು ಎಂದು ಡಾ. ದೀಕ್ಷಾ ಅವರು ಹೇಳುತ್ತಾರೆ.​

ಒಣಖರ್ಜೂರ ಹಾಗೂ ಒಣದ್ರಾಕ್ಷಿಗಳನ್ನು ಸೇವಿಸಿ

  • ಒಣದ್ರಾಕ್ಷಿ ಮತ್ತು ಒಣಖರ್ಜೂರ ಹಣ್ಣುಗಳು ಬೆಲೆ ಯಲ್ಲಿ ದುಬಾರಿಯಾದರೂ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು.
  • ಪ್ರತಿದಿನ ಬೆಳಗ್ಗೆ ಇವುಗಳನ್ನು ನೆನೆಸಿಟ್ಟು ಸೇವನೆ ಮಾಡು ವುದರಿಂದ, ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಆರೋಗ್ಯ ಕಾರಿ ಲಾಭ ಗಳು ಕೂಡ ಸಿಗುತ್ತದೆ.
  • ಪ್ರಮುಖವಾಗಿ ಒಣಖರ್ಜೂರ ಗಳಲ್ಲಿ ನಾರಿನಾಂಶದ ಪ್ರಮಾಣ ಯಥೇಚ್ಛವಾಗಿ ಕಂಡುಬರುವುದರ ಜೊತೆಗೆ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್ಸ್, ಖನಿಜಾಂ ಶಗಳು, ಕಬ್ಬಿಣಾಂಶಗಳು ಅದೇ ರೀತಿಯಾಗಿ ಪೊಟ್ಯಾಶಿ ಯಂ, ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಅಂಶದ ಪ್ರಮಾಣ ಕೂಡ, ಈ ಒಣಫಲದಲ್ಲಿ ಹೇರಳವಾಗಿ ಕಂಡು ಬರುತ್ತದೆ.
  • ಹೀಗಾಗಿ ಪ್ರತಿದಿನ ಮೂರು-ನಾಲ್ಕು ಒಣ ಖರ್ಜೂರ ಗಳನ್ನು  ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಇನ್ನು ಮೂರು-ನಾಲ್ಕು ಒಣ ದ್ರಾಕ್ಷಿಯನ್ನು ಸಂಜೆಯ ಸಮಯದಲ್ಲಿ ಸ್ನ್ಯಾಕ್ಸ್ ರೀತಿ ಸೇವನೆ ಮಾಡು ವುದರಿಂದ ಕಬ್ಬಿಣಾಂಶದ ಕೊರತೆ ಕ್ರಮೇಣವಾಗಿ ಕಡಿಮೆ ಆಗುತ್ತಾ ಹೋಗುತ್ತದೆ.
  • ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಸಂಗತಿ ಏನೆಂ ದರೆ, ಈಗಾಗಲೇ ದೇಹದ ತೂಕ ಹೆಚ್ಚಾಗಿರುವವರು ಅಥವಾಬೊಜ್ಜಿನ ಸಮಸ್ಯೆ ಇರುವವರು ದ್ರಾಕ್ಷಿ ಮತ್ತು ಖರ್ಜೂರಗಳನ್ನು ಮಿತ ಪ್ರಮಾಣದಲ್ಲಿ ತಿನ್ನುವುದು ಒಳ್ಳೆಯದು. ಯಾಕೆಂದ್ರೆ ಇದರಲ್ಲಿ ಕ್ಯಾಲೋರಿ ಅಂಶಗಳು ಕಂಡು ಬರುತ್ತದೆ.

ಕ್ಯಾರೆಟ್ ಮತ್ತು ಬೀಟ್‌ರೂಟ್ ಜ್ಯೂಸ್

  • ಕ್ಯಾರೆಟ್ ಮತ್ತು ಬೀಟ್‌ರೂಟ್ ಇವರೆಡೂ ತರಕಾರಿ ಗಳಲ್ಲಿ ಯಥೇಚ್ಛವಾಗಿ ವಿಟಮಿನ್ಸ್‌ಗಳು ಹಾಗೂ ಖನಿ ಜಾಂಶಗಳು ಇರುವ ಕಾರಣದಿಂದಾಗಿ, ಇವು ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವುದು ಈಗಾಲೇ ಸಾಬೀತಾಗಿದೆ.
  • ಇನ್ನು ಡಾ. ದೀಕ್ಷಾ ಅವರು ಹೇಳುವ ಪ್ರಕಾರ, ಈ ಎರಡೂ ತರಕಾ ರಿಗಳನ್ನು ಮಿಶ್ರಣ ಮಾಡಿ, ಜ್ಯೂಸ್ ರೀತಿ ಮಾಡಿ ಕೊಂಡು ಬೆಳ ಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯುವು ದರಿಂದ, ಆರೋಗ್ಯ ವೃದ್ಧಿ ಆಗುವುದು ಮಾತ್ರವಲ್ಲದೆ, ಕಬ್ಬಿಣಾಂಶದ ಕೊರತೆಯೂ ಕೂಡ ದೂರವಾಗುವುದು.​

ನುಗ್ಗೆಕಾಯಿ ಸೊಪ್ಪು

  • ನುಗ್ಗೆಕಾಯಿ ಅಂತೆ, ನುಗ್ಗೆ ಸೊಪ್ಪು ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರಮುಖವಾಗಿ ನುಗ್ಗೆ ಸೊಪ್ಪಿನಲ್ಲಿ ಕಬ್ಬಿಣಾಂಶದ ಪ್ರಮಾಣ, ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾ ಸಿಯಂ, ಮೆಗ್ನೀಷಿಯಂ, ರಂಜಕ ಮತ್ತು ಸತುವುಗಳಂತಹ ಅಗತ್ಯ ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ.
  • ಹೀಗಾಗಿ ಈ ಸೊಪ್ಪನ್ನು ತಮ್ಮ ಆಹಾರಪದ್ಧತಿಯಲ್ಲಿ ಸೇರಿಸಿ ಕೊಳ್ಳುವುದರಿಂದ, ದೇಹದಲ್ಲಿ ಕಂಡು ಬರುವ ಕಬ್ಬಿಣಾಂಶದ ಕೊರತೆಯನ್ನು ದೂರ ಮಾಡಬಹು ದಾಗಿದೆ ಎಂದು, ತಜ್ಞರಾದ ದೀ ಅಭಿಪ್ರಾಯ ಪಡುತ್ತಾರೆ.
  • ಇನ್ನು ಪ್ರಮುಖವಾಗಿ ಗಮನಿಸಬೇಕಾದ ಸಂಗತಿ ಏನೆಂದರೆ, ಅಧಿಕ ಉಷ್ಣತೆ ಸಮಸ್ಯೆ ಇದ್ದವರು, ನುಗ್ಗೆ ಸೊಪ್ಪು ಮತ್ತು ಎಳ್ಳು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.

ಕೊನೆಯ ಮಾತು

  • ವಿಟಮಿನ್ ‘ ಸಿ ‘ ಅಂಶ ಹೆಚ್ಚಾಗಿರುವ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಿ, ಸಿಟ್ರಸ್ ಹಣ್ಣುಗಳಾದ ಮೂಸಂಬಿ, ಕಿತ್ತಳೆ, ಬೆರ್ರಿ ಹಣ್ಣುಗಳು, ಮತ್ತು ಕಲ್ಲಂಗಡಿ ಹಣ್ಣುಗಳು ಆಹಾರ ಪದ್ಧತಿಯಲ್ಲಿ ಇರುವುದು ಒಳ್ಳೆಯದು.
  • ಕಬ್ಬಿಣಾಂಶ ಹೆಚ್ಚಾಗಿರುವ ಆಹಾರಗಳಾದ ಬಾಳೆಹಣ್ಣು, ಅಲಸಂದೆ ಕಾಳುಗಳು, ಬಟಾಣಿ ಕಾಳುಗಳು, ಓಟ್ಸ್, ಪಾಲಕ್ ಸೊಪ್ಪು, ಕ್ವಿನೋವ ಇತ್ಯಾದಿ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಿ
  • ಕಬ್ಬಿಣದ ಅಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುವ ಕುಂಬಳಕಾಯಿ ಬೀಜಗಳನ್ನು ಹಸಿಯಾಗಿ ಅಥವಾ ಹುರಿದು ತಿನ್ನುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: VK

Leave a Reply

Your email address will not be published. Required fields are marked *