September 20, 2024
ಬಂಟ್ವಾಳ ತಾಲೂಕು ಶಂಭೂರು ಶ್ರೀಮತಿ ಗೀತಾ ವಾಸುದೇವ ಮತ್ತು ಶ್ರೀ ವಾಸುದೇವ ಭಂಡಾರಿ ದಂಪತಿಯ ಪುತ್ರ ಚಿ॥ ತಕ್ಷಣ್ ಕುಮಾರ್ ಹಾಗೂ ಬೆಳ್ತಂಗಡಿ ತಾಲೂಕು ವೇಣೂರು ಗುಂಡದಡೆ  ದಿವಂಗತ ಜಯ ಭಂಡಾರಿ ಮತ್ತು ಶ್ರೀಮತಿ ಶಶಿಕಲಾ ಜಯ ಭಂಡಾರಿ ಯ ಪುತ್ರಿ ಚಿ॥ಸೌ॥ ಸ್ಮಿತಾ  ಇವರ ವಿವಾಹ ನಿಶ್ಚಿತಾರ್ಥವು ಜೂನ್ 21 ರ ಗುರುವಾರದಂದು  ವೇಣೂರು ಗಡಾ೯ಡಿ ಚಾಮುಂಡೇಶ್ವರಿ ಹಾಲ್ ನಲ್ಲಿ ಕಳಿಯೂರು ಶ್ರೀ ಯಾದವ್ ಭಂಡಾರಿ (ಭಾವ )ಮತ್ತು ಶ್ರೀಮತಿ ಅಕ್ಷತಾ ಯಾದವ್  ( ಸಹೋದರಿ ) ದರ್ಶನ್ ಶಂಭೂರ್ (ಸಹೋದರ ) ಹಾಗೂ  ಕುಟುಂಬಸ್ಥರು  ಬಂಧು ಮಿತ್ರರ ಸಮ್ಮುಖದಲ್ಲಿ  ಶುಭಾಶೀರ್ವಾದದೊಂದಿಗೆ ವಿಜೃಂಭಣೆಯಿಂದ ನಡೆಯಿತು.
ನೂತನ ಭಾವಿ ವಧುವರರಿಗೆ ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ವಿವಾಹ ನಿಶ್ಚಿತಾರ್ಥದ ಶುಭ ಹಾರೈಸುತ್ತಾ, ಶೀಘ್ರದಲ್ಲಿ ನಿಮ್ಮ ವಿವಾಹವು ನಡೆದು ನಿಮ್ಮ ಸಕಲ ಇಷ್ಟಾರ್ಥವನ್ನು ಭಗವಂತನು ನೆರವೇರಿಸಲಿ ಎಂದು ಶುಭ ಹಾರ್ಧಿಕವಾಗಿ ಹಾರೈಸುತ್ತದೆ.
Advt.
-ಭಂಡಾರಿವಾರ್ತೆ

Leave a Reply

Your email address will not be published. Required fields are marked *