September 20, 2024
Advt.
ಕಾರ್ಕಳದ ಅಂಡಾರು ವಿನ ಶ್ರೀ ಪ್ರಕಾಶ್ಚಂದ್ರ ಭಂಡಾರಿ ಮತ್ತು ಉಚ್ಚಿಲ ಪಣಿಯೂರಿನ ಕು.ಅಶ್ವಿಜ ಇವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಮೇ 10 ರ ಗುರುವಾರ ಪಣಿಯೂರಿನ ಮಳಂಗೋಳಿಯ ವಧುವಿನ ಸ್ವಗೃಹ ಕೃಷ್ಣಕೃಪಾದಲ್ಲಿ ವಿಜೃಂಭಣೆಯಿಂದ ನೆರವೇರಿತು.
 
ಶ್ರೀ ಪ್ರಕಾಶ್ಚಂದ್ರ ಅಂಡಾರು ಭಂಡಾರಿ ಕುಟುಂಬದ ದಿವಂಗತ ರಾಜು ಭಂಡಾರಿ ಮತ್ತು ಸುಮತಿ ಭಂಡಾರಿಯವರ ಪುತ್ರ ಹಾಗೂ ಕುಮಾರಿ ಅಶ್ವಿಜ ಪಣಿಯೂರಿನ ಶ್ರೀ ಪ್ರಭಾಕರ ಭಂಡಾರಿ ಮತ್ತು ಶ್ರೀಮತಿ ಆಶಾ ಪ್ರಭಾಕರ ಭಂಡಾರಿಯವರ ಪುತ್ರಿ.
 
ಇವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗುರು ಹಿರಿಯರು,ಬಂಧು ಮಿತ್ರರು,ಆತ್ಮೀಯರು,ಹಿತೈಷಿಗಳು ಮತ್ತು ಪ್ರಮುಖವಾಗಿ ಭಂಡಾರಿ ವಾರ್ತೆಯ ಕಾನೂನು ಸಲಹೆಗಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಹೆಚ್ಚುವರಿ ಅಭಿಯೋಜಕ ಶ್ರೀಯುತ ಮನೋರಾಜ್ ರಾಜೀವ ಮತ್ತು ಭಂಡಾರಿ ಯೂತ್ ವಾರಿಯರ್ಸ್ ಸದಸ್ಯ ವಿಪಿನ್ ಭಂಡಾರಿ ಕಟ್ಲಾ ಹಾಜರಾಗಿ ಭಾವೀ ದಂಪತಿಗೆ ಶುಭ ಹಾರೈಸಿ ಆಶೀರ್ವದಿಸಿದರು.
 
ನಿಶ್ಚಿತಾರ್ಥ ಸಂಭ್ರಮದಲ್ಲಿ ಒಂದಾದ ನವಜೋಡಿ ಆದಷ್ಟು ಶೀಘ್ರ ವಿವಾಹ ಬಂಧನದಲ್ಲಿ ಒಂದಾಗಿ ಸುಖ ಸಂತೋಷ ನೆಮ್ಮದಿಯುತ ಜೀವನ ನಡೆಸುವಂತೆ ಶ್ರೀ ದೇವರು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
Advt.
-ಭಂಡಾರಿವಾರ್ತೆ

Leave a Reply

Your email address will not be published. Required fields are marked *