September 20, 2024

ಸುರತ್ಕಲ್ ಮುಕ್ಕ ಬಳಿಯ  ಹಳೆಯಂಗಡಿಯ ಶ್ರೀ ವಜ್ರಾಕ್ಷ ಭಂಡಾರಿ ತೋಕೂರು ಜನವರಿ 19,2019 ರ ಶನಿವಾರ ಸಂಜೆ 5:30 ಕ್ಕೆ ಕೊನೆಯುಸಿರೆಳೆದರು.ಅವರಿಗೆ ಸುಮಾರು 73 ವರ್ಷ ವಯಸ್ಸಾಗಿತ್ತು.

ವಜ್ರಾಕ್ಷ ಭಂಡಾರಿಯವರು ಪತ್ನಿ ಶ್ರೀಮತಿ ರೇವತಿ ಭಂಡಾರಿ,ಮುಂಬಯಿಯಲ್ಲಿ ನೆಲೆಸಿರುವ ಅವರ ಏಕೈಕ ಪುತ್ರಿ ಶ್ರೀಮತಿ ಸೌಮ್ಯ ಸಮೀರ್ ರಸಮ್, ಮೊಮ್ಮಕ್ಕಳಾದ ಸುದಾನ್ಷ್ ಮತ್ತು ಸರ್ವೇಶ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಜನವರಿ 20,2019ರ ಭಾನುವಾರ ತೋಕೂರು ನಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿತು.
ದುಃಖತಪ್ತ ಕುಟುಂಬಸ್ಥರಿಗೆ ವಜ್ರಾಕ್ಷ ಭಂಡಾರಿಯವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಮತ್ತು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ”  ಶ್ರೀದೇವರಲ್ಲಿ ಪ್ರಾರ್ಥಿಸುತ್ತದೆ. 

“ಭಂಡಾರಿವಾರ್ತೆ.”

Leave a Reply

Your email address will not be published. Required fields are marked *