September 20, 2024

ಕುಂದಾಪುರ ತಾಲೂಕಿನ ಹುಣ್ಸೇಮಕ್ಕಿ ಹೊಂಬಾಡಿಯ ಶ್ರೀ ಶೇಖರ ಭಂಡಾರಿ ಮತ್ತು ಶ್ರೀಮತಿ ಸುಲೋಚನ ಶೇಖರ ಭಂಡಾರಿಯವರ ಪುತ್ರ ಶ್ರೀ ಸಂದೀಪ್ ಭಂಡಾರಿ ಡಿಸೆಂಬರ್ 15 ರ ರಾತ್ರಿ ಸೌಕೂರು ಬಳಿಯ ಶೆಟ್ರಕಟ್ಟೆ ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದರು. ಅವರಿಗೆ 22 ವರ್ಷ ವಯಸ್ಸಾಗಿತ್ತು.

ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಜಾಹೀರಾತು ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು ಮನೆಯಲ್ಲಿ ಹರಕೆ ಯಕ್ಷಗಾನ ಇದ್ದುದರಿಂದ ಊರಿಗೆ ಬಂದಿದ್ದರು. ಇಂತಹ ಶುಭ ಸಂದರ್ಭದಲ್ಲಿಯೇ ಈ ರೀತಿಯ ದುರ್ಘಟನೆ ಸಂಭವಿಸಿರುವುದು ಹೆತ್ತವರಿಗೆ ಆಘಾತವನ್ನುಂಟು ಮಾಡಿದೆ. ದುಡಿಯುವ ಮಗ ಅಕಾಲಿಕ ಮರಣ ಹೊಂದಿರುವುದು ಹೆತ್ತವರಿಗೆ ದಿಕ್ಕುತೋಚದಂತಾಗಿದೆ.

ತಂದೆ ತಾಯಿ ಮತ್ತು ಕುಟುಂಬಸ್ಥರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ, ಸಂದೀಪ್ ನ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಪ್ರಾರ್ಥಿಸುತ್ತದೆ.

–ಭಂಡಾರಿವಾರ್ತೆ.

Leave a Reply

Your email address will not be published. Required fields are marked *