September 20, 2024

ಗೆಳೆತನ.

ತಿ‌ಳಿಯಲಿಲ್ಲ ಆ ಕ್ಷಣ
ಗೆಳೆತನ ಮೂಡಲು ಕಾರಣ
ಬಾಳಿಗಿಂದು ಅದುವೇ ಆಶಾಕಿರಣ.

ಬಿಡಿಸಲಾಗದ ಅಮೂಲ್ಯ ಬಂಧನ
ಜೊತೆಗಿದ್ದರೆ ಬಾಳಲ್ಲಿ ಈ ಗೆಳೆತನ
ತಂಪೆನಿಸುವುದು ತನುಮನ.

ದೇಹವನು ತೊರೆಯುವ ಮುನ್ನ ಪ್ರಾಣ
ದೂರಕೆ ಸಾಗಲಿ ಈ ಪಯಣ
ನೀಡುತ ಜಗಕೆ ಪ್ರೇರಣ.

ಜೊತೆಯಲಿ ಸಾಗುವ ವಚನ
ಶಾಶ್ವತ ಸ್ನೇಹದ ಸಾರ್ಥಕ ಜೀವನ
ಒದಗಿಸಿದ ದೇವನಿಗೊಂದು ನನ್ನ ನಮನ.

ರಚನೆ. -ಪ್ರಕೃತಿ ಭಂಡಾರಿ ಆಲಂಕಾರು

Leave a Reply

Your email address will not be published. Required fields are marked *