September 20, 2024
ಬೆಳ್ತಂಗಡಿ ಗುರುವಾಯನಕೆರೆಯ ಆದೇಲು ಹೌಸ್ ನಲ್ಲಿ ಶ್ರೀ ದಾಮೋದರ ಭಂಡಾರಿ ಮತ್ತು ಶ್ರೀಮತಿ ಯಶೋಧ ದಾಮೋದರ ಭಂಡಾರಿ ದಂಪತಿಯ ವೈವಾಹಿಕ ಜೀವನದ ಐವತ್ತನೇ ವರ್ಷಾಚರಣೆಯನ್ನು ಇತ್ತೀಚಿಗೆ ಅವರ ನಿವಾಸದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಈ ಶುಭ ಸಂದರ್ಭದಲ್ಲಿ ಹಿರಿಯ ದಂಪತಿಗಳಿಗೆ ಅವರ ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಬಂಧು ಬಾಂಧವರು, ಹಿತೈಷಿಗಳು ಶುಭ ಹಾರೈಸಿ ಆಶೀರ್ವಾದ ಪಡೆದರು.
ಮದುವೆಯ ವಾರ್ಷಿಕೋತ್ಸವದ ಸುವರ್ಣ ಸಂಭ್ರಮವನ್ನಾಚರಿಸಿಕೊಂಡ ಹಿರಿಯ ಜೀವಗಳಿಗೆ ಭಗವಂತನು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ.

Leave a Reply

Your email address will not be published. Required fields are marked *