September 20, 2024

ಉಡುಪಿಯ ಕಾಪು ನಿವಾಸಿ ಶ್ರೀ ಗೋಪಾಲಕೃಷ್ಣ ಭಂಡಾರಿ ಯವರು ಮೇ 10 ರ ಗುರುವಾರ ದೈವಾಧೀನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಅವರು ಪತ್ನಿ ಶ್ರೀಮತಿ ಶಾರದಾ ಗೋಪಾಲಕೃಷ್ಣ ಭಂಡಾರಿ, ಮಕ್ಕಳಾದ ಶ್ರೀ ಪ್ರವೀಣ್ ಭಂಡಾರಿ, ಶ್ರೀ ಪ್ರಖ್ಯಾತ್ ಭಂಡಾರಿ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.


ಶ್ರೀ ಗೋಪಾಲಕೃಷ್ಣ ಭಂಡಾರಿಯವರು ಪೋಸ್ಟ್ ಮಾಸ್ಟರ್ ಉದ್ಯೋಗದಲ್ಲಿದ್ದು ಉಡುಪಿ, ಕಾಪು, ಉದ್ಯಾವರ, ಮೂಳೂರು ಮುಂತಾದ ಕಡೆಗಳಲ್ಲಿ ಸೇವೆ ಸಲ್ಲಿಸಿ ಜನಮನದಲ್ಲಿ ನೆಲೆಸಿದ್ದ ಅವರ ಅಗಲಿಕೆ ಹಲವರಿಗೆ ದುಃಖವನ್ನುಂಟು ಮಾಡಿರುವುದು ಸಹಜ.

ಶ್ರೀ ದೇವರು ಅವರ ಕುಟುಂಬಸ್ಥರಿಗೆ, ಆತ್ಮೀಯರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕೊಟ್ಟು,ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *