September 20, 2024
ಕನಿಕಟ್ಟ ಗ್ರಾಮದ ದಿವಂಗತ ರುಕ್ಕಯ್ಯ ಭಂಡಾರಿಯವರ ಹಿರಿಯ ಮಗ ಶ್ರೀ ಗೋಪಾಲ ಭಂಡಾರಿಯವರು ಮೂಡಬಿದಿರೆಯ ಬೆಳುವಾಯಿಯ ತಮ್ಮ ಸ್ವಗೃಹದಲ್ಲಿ ವಯೋಸಹಜ ಅನಾರೋಗ್ಯದಿಂದ ಜನವರಿ 14 ರ ಭಾನುವಾರ ರಾತ್ರಿ 11 ಗಂಟೆಗೆ ಕೊನೆಯುಸಿರೆಳೆದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಲಲಿತಾ ಗೋಪಾಲ ಭಂಡಾರಿ, ಮುಂಬಯಿಯಲ್ಲಿ ನೆಲೆಸಿರುವ ಗಂಡು ಮಕ್ಕಳಾದ ಶ್ರೀ ದಿನೇಶ್ ಭಂಡಾರಿ ಮತ್ತು ಶ್ರೀ ನಾಗೇಶ್ ಭಂಡಾರಿ, ಬಳ್ಳಾರಿಯಲ್ಲಿ ನೆಲೆಸಿರುವ ಮಗ ಶ್ರೀ ರಾಜೇಶ್ ಭಂಡಾರಿ, ಮುಂಬಯಿಯಲ್ಲಿರುವ ಮಗಳು ಶ್ರೀಮತಿ ಆಶಾ ರವಿ ಭಂಡಾರಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.
ಇವರ ಅಂತ್ಯಕ್ರಿಯೆ ಜನವರಿ 15 ರ ಸಂಜೆ 6 ಗಂಟೆಗೆ ಕಸರ್ ಗದ್ದೆ ರುದ್ರಭೂಮಿಯಲ್ಲಿ ನೆರವೇರಲಿದೆ.
ಶ್ರೀ ಗೋಪಾಲ ಭಂಡಾರಿಯವರ ಅಗಲಿಕೆಯ ದುಃಖದಲ್ಲಿರುವ ಅವರ ಕುಟುಂಬದವರಿಗೆ, ಆಪ್ತರಿಗೆ, ಬಂಧುಗಳಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಮತ್ತು ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.
ಭಂಡಾರಿವಾರ್ತೆ

Leave a Reply

Your email address will not be published. Required fields are marked *