September 20, 2024

           ಕ್ಷಿಣ ಕನ್ನಡದ ಬೆಳ್ತಂಗಡಿಯ ದಿವಂಗತರಾದ ಕುತ್ರೊಟ್ಟು ಮಂಜು ಭಂಡಾರಿ ಮತ್ತು ಕಿನ್ಯಕ್ಕ ದಂಪತಿಗಳ ಮಗನಾದ ಶ್ರೀ ಕೆ. ಅನಂತರಾಮ ಬಂಗಾಡಿಯವರು ನವೆಂಬರ್ 14, 2018 ರ ಬುಧವಾರ ತಮ್ಮ 68ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮವನ್ನು ಸ್ವಗೃಹದಲ್ಲಿ ಆಚರಿಸಿಕೊಂಡಿದ್ದಾರೆ.

        ಇವರಿಗೆ ಇವರ ಪತ್ನಿ ಶ್ರೀಮತಿ ಸುಮತಿ ಅನಂತರಾಮ ಬಂಗಾಡಿ, ಮಗಳು ಶ್ರೀಮತಿ ಸಂಧ್ಯಾ ಕೇಶವ ಹಿರೇಬೆಟ್ಟು, ಅಳಿಯ ಶ್ರೀ ಕೇಶವ್ ಭಂಡಾರಿ ಹಿರೇಬೆಟ್ಟು, ಮಗ ಶ್ರೀ ಸಂದೇಶ್ ಕುಮಾರ್ ಬಂಗಾಡಿ, ಸೊಸೆ ಶ್ರೀಮತಿ ಶುಭ ಸಂದೇಶ, ಮೊಮ್ಮಕ್ಕಳಾದ ಸಂಕೇತ್, ಸೃಷ್ಠಿ, ಸಂಪ್ರೀತ್  ಹಾಗೂ ಬಂಧುಗಳು, ಆತ್ಮೀಯರು ಹುಟ್ಟು ಹಬ್ಬದ ಶುಭಾಶಯಗಳುನ್ನು ಕೋರಿದ್ದಾರೆ.

                68ನೇ ವರ್ಷದ  ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಶ್ರೀ ಕೆ ಅನಂತರಾಮ ಬಂಗಾಡಿಯವರಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ, ಅವರ ಬಾಳಲ್ಲಿ ಸುಖ ಶಾಂತಿ ನೆಮ್ಮದಿಯು ತುಂಬಿ ಹರಿಯಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ, ಭಂಡಾರಿವಾರ್ತೆ ತಂಡದಿಂದ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದೇವೆ.

  • ಭಂಡಾರಿವಾರ್ತೆ.

Leave a Reply

Your email address will not be published. Required fields are marked *