September 20, 2024

             

            ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡಬಗೆರೆಯ ಪ್ರಸ್ತುತ ಮಸ್ಕತ್ ನಲ್ಲಿ ಉದ್ಯೋಗದಲ್ಲಿರುವ ಶ್ರೀ ಅನಿಲ್ ಭಂಡಾರಿ ಮತ್ತು ಶ್ರೀಮತಿ ಚೇತನಾ ಅನಿಲ್ ಭಂಡಾರಿ ದಂಪತಿಯು ತಮ್ಮ ಮಗ ಮಾಸ್ಟರ್ ಅನ್ವಿತ್ ಅನಿಲ್ ಭಂಡಾರಿಯ ಎರಡನೇ ವರ್ಷದ ಹುಟ್ಟು ಹಬ್ಬವನ್ನು ಜೂನ್ 17 ರ ಭಾನುವಾರ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

              ಈ ಶುಭ ಸಂದರ್ಭದಲ್ಲಿ ಕಡಬಗೆರೆಯ ಅಜ್ಜ ಶ್ರೀ ವಸಂತ ಭಂಡಾರಿ, ಅಜ್ಜಿ ಶ್ರೀಮತಿ ಮೀನಾಕ್ಷಿ ವಸಂತ ಭಂಡಾರಿ, ಮೂಡುಬಿದಿರೆಯ ಅಜ್ಜ ಶ್ರೀ ದಾಮೋದರ ಭಂಡಾರಿ, ಅಜ್ಜಿ ಶ್ರೀಮತಿ ಗಿರಿಜಾ ದಾಮೋದರ ಭಂಡಾರಿ, ಪಿಜ್ಜ ಶ್ರೀ ವಾಸು ಭಂಡಾರಿ, ಪಿಜ್ಜಿ ಶ್ರೀಮತಿ ಶಾಂತ ವಾಸು ಭಂಡಾರಿ, ಬೆಂಗಳೂರಿನ ಅತ್ತೆ ಶ್ರೀಮತಿ ಅನಿತಾ ಹರೀಶ್ ಭಂಡಾರಿ, ಮೂಡುಬಿದಿರೆಯ ಅತ್ತೆ ಶ್ರೀಮತಿ ಅಮಿತಾ ಗಿರಿಧರ್ ಭಂಡಾರಿ, ಚಿಕ್ಕಮ್ಮ ಕುಮಾರಿ ನಂದನಾ ಭಂಡಾರಿ, ಪುಟಾಣಿಗಳಾದ ಮನೀಷ್, ದೇವಿಕಾ, ಧನ್ವಿತ್ ಮತ್ತು ಕುಟುಂಬಸ್ಥರು ಶುಭ ಹಾರೈಸಿದ್ದಾರೆ.
            

              ಎರಡನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಅನ್ವಿತ್ ಗೆ ಶ್ರೀ ದೇವರು ಆಯುರಾರೋಗ್ಯವನ್ನು ದಯಪಾಲಿಸಿ ಉಜ್ವಲ ಭವಿಷ್ಯವನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
 

“ಭಂಡಾರಿವಾರ್ತೆ”

Leave a Reply

Your email address will not be published. Required fields are marked *