September 20, 2024

ಕಾರ್ಕಳದ ಕಡಾರಿಯ ಶ್ರೀ ಆನಂದ ಭಂಡಾರಿ ಮತ್ತು ಶ್ರೀಮತಿ ಜಯಂತಿ ಆನಂದ ಭಂಡಾರಿ ದಂಪತಿಯ ಪುತ್ರ ಶ್ರೀ ಪ್ರಶಾಂತ್ ಭಂಡಾರಿ ಯವರು ಜೂನ್ 10,ಸೋಮವಾರದಂದು ತಮ್ಮ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

 

BBM ಪದವೀಧರರಾಗಿ ಕಾರ್ಕಳದಲ್ಲಿ ಪ್ರಿಷಾ ಎಂಬ ಕನ್ಸಲ್ಟೆನ್ಸಿ ಪ್ರಾರಂಭಿಸಿರುವ ಇವರು ಭಂಡಾರಿ ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸುವ ಸದುದ್ದೇಶದಿಂದ ಭಂಡಾರಿವಾರ್ತೆ ತಂಡದೊಂದಿಗೆ ಕೈ ಜೋಡಿಸಿ, ಪತ್ರಿಕೆಯ ಆರಂಭದ ದಿನದಿಂದಲೂ ತಾಂತ್ರಿಕ ವರ್ಗದೊಂದಿಗೆ ದುಡಿಯುತ್ತಾ, ಅವಶ್ಯಕವೆನಿಸಿದಾಗ ಉಪಯುಕ್ತ ಲೇಖನಗಳನ್ನು ಬರೆಯುತ್ತಾ, ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಾ ಪತ್ರಿಕೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ನೇರ ನಡೆನುಡಿಯಿಂದಾಗಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರೂ ತಮ್ಮ ಸಿದ್ಧಾಂತಕ್ಕೆ ಬದ್ಧರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರು ಬರೆದ ಹಲವು ಲೇಖನಗಳು ಭಂಡಾರಿವಾರ್ತೆಯಲ್ಲಿ ಪ್ರಕಟಗೊಂಡು ಓದುಗರ ಗಮನ ಸೆಳೆದಿವೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಪ್ರಶಾಂತ್ ಭಂಡಾರಿಯವರಿಗೆ ಅವರ ತಂದೆ,ತಾಯಿ, ತಂಗಿ ಕುಮಾರಿ ಪ್ರತಿಮಾ ಭಂಡಾರಿ, ಕುಟುಂಬಸ್ಥರು, ಸ್ನೇಹಿತರು ಹಾಗೂ ಸಹೋದ್ಯೋಗಿಗಳು ಶುಭ ಹಾರೈಸಿದ್ದಾರೆ.

ಪ್ರಶಾಂತ್ ತಮ್ಮ ಜೀವನದಲ್ಲಿ, ವೃತ್ತಿ ಬದುಕಿನಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಿ ಯಶಸ್ಸು ಕಾಣಲಿ,ಶ್ರೀ ದೇವರು ಅವರಿಗೆ ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಹಾರೈಸುತ್ತಾ, ಭಂಡಾರಿವಾರ್ತೆ ಮತ್ತು ತಂಡದ ಪ್ರತಿಯೊಬ್ಬರೂ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದಾರೆ.

 

 

ಭಂಡಾರಿವಾರ್ತೆ.

 

Leave a Reply

Your email address will not be published. Required fields are marked *