September 20, 2024

ಉಡುಪಿ ಕಾಡಬೆಟ್ಟು ದಿವಂಗತ ವೆಂಕಪ್ಪ ಭಂಡಾರಿ ಮತ್ತು ದಿವಂಗತ ಗಿರಿಜಾ ದಂಪತಿ ಹಾಗೂ ಸಾಗರ ತಾಲ್ಲೂಕು ಕಾರ್ಗಲ್ ಶ್ರೀ ಮಹಾದೇವಪ್ಪ ಮತ್ತು ರಾಜ ಅಮ್ಮಣ್ಣಿ ದಂಪತಿಗಳ ಮೊಮ್ಮಗ ಭಂಡಾರಿ ಸಮಾಜದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿರುವ ಸಮಾಜದ ಕೊಡುಗೈ ದಾನಿ ಬೆಂಗಳೂರು ಮಾರತಹಳ್ಳಿಯ ಕರಾವಳಿ ಕೇಬಲ್ ಮತ್ತು ಇಂಟರ್ನೆಟ್ ಸರ್ವಿಸಸ್ ಇದರ ಮಾಲೀಕರು ಮತ್ತು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಸೇವಾ ಟ್ರಸ್ಟಿನ ಉಪಾಧ್ಯಕ್ಷರಾಗಿದ್ದ ಹಾಗೂ ಬೆಂಗಳೂರು ಭಂಡಾರಿ ಸಮಾಜ ಸಂಘದ ಗೌರವ ಅಧ್ಯಕ್ಷರಾಗಿರುವ ಶ್ರೀ ಲಕ್ಷ್ಮಣ್ ಕರಾವಳಿ ಮತ್ತು ಡಾ॥ ಸುಮತಿ ಲಕ್ಷ್ಮಣ್ ಕರಾವಳಿ ದಂಪತಿಯ ಪುತ್ರ ಡಾ॥ಹರ್ಷಿತ್ ಎಲ್. ಭಂಡಾರಿ ವೈದ್ಯಕೀಯ ಪದವಿ ಮತ್ತು ತರಬೇತಿಯನ್ನು ಪೂರೈಸಿದ್ದಾರೆ.

 ಬೆಂಗಳೂರಿನ ರ‍್ಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಬೆಂಗಳೂರಿನ ನ್ಯೂ ಹೊರಿಜಾನ್ ಗುರುಕುಲದಲ್ಲಿ ಪ್ರೌಢ ಶಿಕ್ಷಣ ಪಡೆದು ಬೆಂಗಳೂರು ಬನ್ನೇರುಘಟ್ಟದ ಮಾರುತಿ ಮೆಗ್ನೋಲಿಯ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ವ್ಯಾಸಂಗದ ಬಳಿಕ ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅತ್ಯುತ್ತಮ ಅಂಕದೊಂದಿಗೆ ವೈದ್ಯಕೀಯ ಪದವಿಯನ್ನು ಪಡೆದು ವೈದ್ಯಕೀಯ ತರಬೇತಿಯನ್ನು ಪೂರೈಸಿದ್ದಾರೆ ವೈದ್ಯಕೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡುವ ಕನಸು ನನಸಾಗಲು ಕಚ್ಚೂರು ಶ್ರೀ ನಾಗೇಶ್ವರ ದೇವರ ಅನುಗ್ರಹ ಸದಾ ಇರಲಿ ಎಂಬುದಾಗಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.

Leave a Reply

Your email address will not be published. Required fields are marked *