September 20, 2024

ಡಿಸೆಂಬರ್ 24 ರ ಭಾನುವಾರ ಬಂಟ್ವಾಳ ಬೈಪಾಸ್ ರಸ್ತೆಯ ಪ್ರಿತೇಶ್ ಹೋಟೆಲ್ ಸಭಾಂಗಣದಲ್ಲಿ ಬಂಟ್ವಾಳದ ಶೃಂಗಾರ್ ಜುವೆಲ್ಲರ್ಸ್ ಕುಟುಂಬದ ಕುಡಿಗಳಾದ ಮಾ.ದನೀಶ್ ಮತ್ತು ಮಾ.ತನ್ಮಯ್ ತಮ್ಮ ಹತ್ತನೆಯ ವರ್ಷದ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.


ಮುದ್ದುಮಕ್ಕಳ ಹುಟ್ಟು ಹಬ್ಬದ ಈ ಶುಭಸಂದರ್ಭದಲ್ಲಿ ದನೀಶ್ ತಂದೆತಾಯಿಯರಾದ ಶ್ರೀ ದಿನೇಶ್ ಭಂಡಾರಿ ಮತ್ತು ಶ್ರೀಮತಿ ಶ್ವೇತಾ ದಿನೇಶ್ ಭಂಡಾರಿ,ತನ್ಮಯ್ ತಂದೆತಾಯಿಯರಾದ ಶ್ರೀ ಸತೀಶ್ ಭಂಡಾರಿ ಮತ್ತು ಶ್ರೀಮತಿ ಶೋಭಾ ಸತೀಶ್ ಭಂಡಾರಿ,ಅಜ್ಜಿ ಶ್ರೀಮತಿ ಲೀಲಾ ಸದಾಶಿವ ಭಂಡಾರಿ, ದೊಡ್ಡಪ್ಪ ದೊಡ್ಡಮ್ಮಂದಿರಾದ ಶ್ರೀ ಜಗದೀಶ್ ಭಂಡಾರಿ ಶ್ರೀಮತಿ ಸುಜಾತಾ ಜಗದೀಶ್ ಭಂಡಾರಿ,ಬಂಟ್ವಾಳ. ಮತ್ತು ಶ್ರೀ ಕಿಶೋರ್ ಭಂಡಾರಿ ಶ್ರೀಮತಿ ರಾಜಶ್ರೀ ಕಿಶೋರ್ ಭಂಡಾರಿ,ದುಬೈ.ಚಿಕ್ಕಪ್ಪ ಶ್ರೀ ರಾಜೇಶ್ ಭಂಡಾರಿ ಚಿಕ್ಕಮ್ಮ ಶ್ರೀಮತಿ ಸ್ವಾತಿ ರಾಜೇಶ್ ಭಂಡಾರಿ ಬಂಟ್ವಾಳ, ಮಾವನವರಾದ ಶ್ರೀ ಸುದೇಶ್ ಭಂಡಾರಿ ,ಅತ್ತೆ ಶ್ರೀಮತಿ ಪವಿತ್ರ ಸುದೇಶ್ ಭಂಡಾರಿ ಮೈಸೂರು. ಹಾಗೂ ನೆರೆದಿದ್ದ ಅಪಾರ ಬಂಧುಗಳು, ಹಿತೈಷಿಗಳು,ಸ್ನೇಹಿತರು ಶುಭ ಹಾರೈಸಿದರು.


ಹುಟ್ಟು ಹಬ್ಬದ ಸಂಭ್ರಮವನ್ನು ಆಚರಿಸಿದ ಮಾ.ದನೀಶ್  ಮತ್ತು ಮಾ.ತನ್ಮಯ್ ಅವರಿಗೆ ಭಗವಂತನು ಆಯುರಾರೋಗ್ಯ ಐಶ್ವರ್ಯ ಬಾಗ್ಯ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.

ಭಂಡಾರಿವಾರ್ತೆ

Leave a Reply

Your email address will not be published. Required fields are marked *