September 20, 2024

ಸುರತ್ಕಲ್ ಸೂರಿಂಜೆಯ ಶ್ರೀ ವಾಮನ ಭಂಡಾರಿ ಮತ್ತು ಶ್ರೀಮತಿ ಪುಷ್ಪಾ ಭಂಡಾರಿಯವರು ನೂತನವಾಗಿ ನಿರ್ಮಿಸಿದ ಗೃಹ

ಅಮ್ಮ ನಿವಾಸ


ದ ಗೃಹ ಪ್ರವೇಶ ಸಮಾರಂಭ ದಿನಾಂಕ 23/02/2019 ರ ಶನಿವಾರದಂದು ವಿಜೃಂಭಣೆಯಿಂದ ನಡೆಯಿತು. ಗೃಹ ಪ್ರವೇಶದ ಪ್ರಯುಕ್ತ ವಾಸ್ತು ಹೋಮ , ಸುಧರ್ಶನ ಹೋಮ , ಶನಿ ಪೂಜೆ , ಗಣಹೋಮ ಮತ್ತು ಸತ್ಯನಾರಾಯಣ ಪೂಜೆ ಮುಂತಾದ ಧಾರ್ಮಿಕ ವಿಧಿ ವಿಧಾನಗಳು ಶಾಸ್ತ್ರೋಕ್ತವಾಗಿ ನಡೆಯಿತು.

ಈ ಶುಭ ಸಮಾರಂಭದಲ್ಲಿ ಬಂಧು ಮಿತ್ರರು , ಹಿತೈಷಿಗಳು , ಗಣ್ಯರು ಆಗಮಿಸಿ ಶುಭ ಹಾರೈಸಿ ಆದರಾತಿಥ್ಯ ಸ್ವೀಕರಿಸಿದರು.

ನೂತನ ಮನೆ ನಿರ್ಮಿಸಿ ಗೃಹ ಪ್ರವೇಶದ ಸಂಭ್ರಮದಲ್ಲಿರುವ ಶ್ರೀ ವಾಮನ ಭಂಡಾರಿ ಮತ್ತು ಶ್ರೀಮತಿ ಪುಷ್ಪಾ ಭಂಡಾರಿ ದಂಪತಿಗಳಿಗೆ ಮತ್ತು ಮಕ್ಕಳಿಗೆ ಇಷ್ಟ ದೇವರು ಆಯುರಾರೋಗ್ಯ ಐಶ್ವರ್ಯ ನೀಡಿ ಹರಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ‘ಭಂಡಾರಿ ವಾರ್ತೆ’ ಹಾರೈಸುತ್ತದೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *