September 20, 2024
      ಕೇಳುವುದರಂತೆ ಕಲಿಯುವುದು ಕೂಡ ಬಹಳ ಕಷ್ಟಎಂದು ತೋರುತ್ತದೆ. ನಮ್ಮ ಮನಸ್ಸು ಸ್ವತಂತ್ರವಲ್ಲ‌.ಆದುದರಿಂದ ನಾವು ಏನನ್ನೂ ಕೇಳಿಸಿಕೊಳ್ಳವುದೇಇಲ್ಲ. ನಮಗೆ ಈಗಾಗಲೇ ಗೊತ್ತಿರುವಸಂಗತಿಗಳು ಕಿವಿಯನ್ನು ತುಂಬಿರುತ್ತವೆ. ಆದ್ದರಿಂದಲೇ ಕೇಳಿಸಿಕೊಳ್ಳುವುದು ಅತ್ಯಂತ ಕಷ್ಟವಾದ್ದು. ನಮ್ಮಇಡೀ ಶಕ್ತಿ ಸಾಮರ್ಥ್ಯ, ಜೀವವನ್ನೆಲ್ಲಒಳಗೊಂಡು ಕೇಳಿಸಿಕೊಳ್ಳಲು ಸಾಧ್ಯವಾಗುವುದಾದರೆ ಆಗ ಕೇಳಿಸಿಕೊಳ್ಳುವ ಕ್ರಿಯೆಯೇನಮಗೆ ಬಿಡುಗಡೆಯನ್ನೂ ತರುತ್ತದೆ. ನಿಮ್ಮನ್ನು ಇಡಿಯಾಗಿ ಗಣಿತಕ್ಕೆ ಒಪ್ಪಿಸಿಕೊಂಡಾಗಮಾತ್ರ ಕಲಿಯುವುದಕ್ಕೆ ಸಾಧ್ಯವಾಗುತ್ತದೆ. ಆದರೆ ನಿಮ್ಮಲ್ಲಿ ವಿರೋಧಗಳಿದ್ದರೆ,ನಿಮಗೆ ಕಲಿಯಲು ಇಷ್ಟವಿಲ್ಲದೆಬಲವಂತವಾಗಿ ಕಲಿಯುತ್ತಿದ್ದರೆ,ಆಗ ಕಲಿಯುವುದು ಸಾಧ್ಯವಾಗುವುದಿಲ್ಲ, ಕೇವಲ ವಿಷಯ ಸಂಗ್ರಹವಷ್ಟೇ ಆಗಿರುತ್ತದೆ.ಕಲಿಯುವುದೆಂದರೆ ಅಸಂಖ್ಯಾತ ಪಾತ್ರಗಳಿರುವ ಕಾದಂಬರಿಯನ್ನು ಓದಿದಂತೆ. ಅಂಥ ಕಾದಂಬರಿಯನ್ನು ಓದುವುದಕ್ಕೆನಿಮ್ಮ ಪೂರಾಣ ಗಮನ ಅಗತ್ಯ. ಗಮನ ಚೆದುರಿದರೆ ಕಾದಂಬರಿ ತಿಳಿಯುವುದೇ ಇಲ್ಲ. ನೀವು ಎಲೆಯ ಬಗ್ಗೆ ಕಲಿಯಬೇಕೆಂದಿದ್ದರೆಎಲೆಯನ್ನು ತೀವ್ರವಾಗಿ ಗಮನಕೊಟ್ಟು ನೋಡಬೇಕು. ಅದರ ವಿನ್ಯಾಸ, ಹಾಸು-ಹೊಕ್ಕು,ಅದರ ಜೀವಂತಿಕೆಎಲ್ಲವನ್ನೂ ತೀವ್ರವಾಗಿ ನೋಡಬೇಕು. ಅದರಲ್ಲಿ, ಬಿಡಿ ಎಲೆಯಲ್ಲಿ ಚೆಲುವುಇದೆ,ಶಕ್ತಿ ಇದೆ. ಹಾಗೆಹೂವು,ಮೋಡ,ಸೂರ್ಯಾಸ್ತ, ಮನುಷ್ಯಎಲ್ಲವನ್ನೂ ತೀವ್ರವಾಗಿ ನೋಡಿ.

ಹೊಸತೇನನ್ನಾದರೂ ಕಾಣಬೇಕಿದ್ದರೆ ನಿಮ್ಮಷಕ್ಕೆ ನೀವೇ ಆರಂಭ ಮಾಡಬೇಕು. ವಿಶೇಷವಾಗಿ ಜ್ಞಾನವನ್ನೆಲ್ಲ ನೀಗಿಕೊಂಡು ಬರಿದಾಗಿ ಹೊರಡಬೇಕು.ಜ್ಞಾನಮತ್ತು ನಂಬಿಕೆಗಳನ್ನು ಆಧಾರವಾಗಿಟ್ಟುಕೊಂಡು ಅನುಭವವನ್ನು ಪಡೆಯುವುದು ತೀರ ಸುಲಭ. ಆದರೆ ಅನುಭವಗಳೆಲ್ಲ ನಿಮ್ಮಬಿಂಬಕ್ಕೆ ಅನುಗುಣವಾಗಿ ಮೂಡಿಸಿಕೊಂಡ ಪ್ರತಿಬಿಂಬಗಳೇ ಆಗಿರುತ್ತವೆ. ಆದ್ದರಿಂದಲೇ ಸುಳ್ಳಾಗಿರುತ್ತವೆ.ಹೊಸತಾದುದನ್ನು ನೀವೇ ಕಾಣಬೇಕಾದರೆ ಹಳತರಹೊರೆಯನ್ನು ಹೊತ್ತುಕೊಂಡು ಹೋದರೆ ಉಪಯೋಗವಿಲ್ಲ. ಅದರಲ್ಲೂಜ್ಞಾನ, ಅದೆಷ್ಟು ಮಹಾ ಜ್ಞಾನವೇಆದರೂ ಅದೊಂದು ಹೊರೆ ಮಾತ್ರ. ನಿಮ್ಮ ಕ್ಷೇಮಕ್ಕಾಗಿ, ನಿಮ್ಮ ಪ್ರಿಯವಾದ ಪ್ರತಿಬಿಂಬವನ್ನುಮೂಡಿಸಿಕೊಳ್ಳುವುದಕ್ಕಾಗಿ ಜ್ಞಾನವನ್ನು ಉಪಕರಣವನ್ನಾಗಿ ಬಳಸಿಕೊಳ್ಳುತ್ತೀರಿ. ನಿಮಗಾದ ಅನುಭವ ಬುದ್ಧನಿಗೆಆದಂಥದ್ದು. ಕ್ರಿಸ್ತನಿಗೆ ಆದಂಥದ್ದು, ಮತ್ತೆ ಯಾರಿಗೋ ಆದಂಥದ್ದುಎಂದು ಖಚಿತಪಡಿಸಿಕೊಳ್ಳಲು ಬಯಸುತ್ತೀರಿ. ಆದರೆ ತನ್ನ ಜ್ಞಾನದಮೂಲಕ ತನ್ನದೇ ಪ್ರತಿಬಿಂಬವನ್ನು ನಿರಂತರವಾಗಿಮೂಡಿಸಿಕೊಳ್ಳುತ್ತಿರುವಾತ ನಿಜವಾಗಲೂ ಸತ್ಯದ ಅನ್ವೇಷಕನಲ್ಲ…..

      ಸತ್ಯದ ದರ್ಶನಕ್ಕೆ ದಾರಿಗಳಿಲ್ಲನೀವು ಹೊಸತನ್ನು ಕಾಣಲುಬಯಸಿದ್ದರೆ ಯಾವುದರೊಡನೆಯಾದರೂ ಪ್ರಯೋಗದಲ್ಲಿ ತೊಡಗಿದ್ದರೆ, ನಿಮ್ಮ ಮನಸ್ಸು ಸುಮ್ಮನೆ, ಶಾಂತವಾಗಿ ಇರಬೇಕಾದುದು ಅಗತ್ಯವಲ್ಲವೇ? ನಿಮ್ಮ ಮನಸ್ಸಿನ ತುಂಬಏನೇನೋ ಕಿಕ್ಕಿರಿದಿದ್ದರೆ ತುಂಬಿಕೊಂಡಿದ್ದರೆ, ಮಾಹಿತಿ, ಜ್ಞಾನಗಳು, ತುಂಬಿಕೊಂಡಿದ್ದರೆಹೊಸತು ಕಾಣಲಾರದಂತೆ ಅವೇ ಅಡ್ಡಿ ಮಾಡುತ್ತವೆ. ನಮ್ಮಲ್ಲಿ  ಅನೇಕರಿಗೆ ಇರುವ ತೊಂದರೆ ಮನಸ್ಸಿನದ್ದೇ. ನಮಗೆ ನಮ್ಮ ಮನಸ್ಸೇ ಬಹಳಮುಖ್ಯವಾಗಿ ಬಿಟ್ಟಿದೆ. ಮನಸ್ಸಿಗೆ ಎಷ್ಟು ಮಹತ್ವ ಕೊಟ್ಟಿದೇವೆಂದರೆಹೊಸತು ಕಂಡಾಗಲೆಲ್ಲ ನಮ್ಮ ಮನಸ್ಸು ಮಧ್ಯಪ್ರವೇಶಮಾಡಿಈಗಾಗಲೇ ಗೊತ್ತಿರುವುದರೊಡನೆ ಅದನ್ನು ಹೊಂದಿಸಲು ಪ್ರಯತ್ನಪಡುತ್ತಿರುತ್ತದೆ. ಕಾಲಾತೀತವಾದುದನ್ನು ಕಾಣಬಯಸುವವರಿಗೆ ಜ್ಞಾನ ಮತ್ತು ಕಲಿಕೆಗಳೇಬಹುದೊಡ್ಡ ಆತಂಕಗಳಾಗಿರುತ್ತವೆ.

      ಕಲಿಕೆ ಎಂಬ ಮಾತಿಗೆ ಬಹಳಮಹತ್ವವಿದೆ. ಎರಡು ಬಗೆಯ ಕಲಿಕೆಗಳಿವೆ.ನಮ್ಮಲ್ಲಿ ಅನೇಕರ ಪಾಲಿಗೆ ಕಲಿಕೆಎಂದರೆ ಜ್ಞಾನ, ಅನುಭವ, ತಾಂತ್ರಿಕತೆ, ಅಥವಾ ಭಾಷೆಗಳ ಸಂಗ್ರಹಮಾತ್ರವಾಗಿ ಕಾಣುತ್ತದೆ. ಮಾನಸಿಕವಾದ ಕಲಿಕೆಯೂ ಇದೆ. ಅನುಭವಗಳಮೂಲಕ ಕಲಿಯುವ ದಾರಿ ಅದು.ಅನುಭವಗಳು ನಮ್ಮ ಬದುಕಿನ ಪ್ರತ್ಯಕ್ಷಸಂಗತಿಗಳಿಂದ ಮೂಡಿದವಾಗಿರಬಹುದು. ಇವು ಕೆಲವು ಬಗೆಯಶೇಷಗಳನ್ನು ನಮ್ಮಲ್ಲಿ ಉಳಿಸುತ್ತವೆ.ಬದುಕುವುದು ಹೇಗೆ ಎಂದು ಕಲಿಸುವಎರಡು ಬಗೆಯ ಕಲಿಕೆಗಳು ಇವು; ದೈಹಿಕವಾದ ಕಲಿಕೆ ಮತ್ತು ಮಾನಸಿಕವಾದಕಲಿಕೆ.ಒಂದು ಹೊರಗಿನ ಕೌಶಲ್ಯ, ಇನ್ನೊಂದು ಒಳಗಿನ ಕೌಶಲ್ಯ.ಆದರೆಇವೆರಡರ ನಡುವೆ ವಿಭಜನೆಯ ರೇಖೆಇರುವುದಿಲ್ಲ. ಒಂದು ಇನ್ನೊಂದರೊಡನೆ ಬೆರೆತಿರುತ್ತದೆ. ಅಧ್ಯಯನ ಮತ್ತು ಅಭ್ಯಾಸಗಳ ಮೂಲಕನಾವು ಸಂಗ್ರಹಿಸಿಕೊಳ್ಳುವ ತಾಂತ್ರಿಕ ಕೌಶಲ್ಯದ ಬಗ್ಗೆ ನಾವೀಗಮಾತನಾಡುತ್ತಿಲ್ಲ.ನಮಗೆ ಮುಖ್ಯವಾದದ್ದು ಮಾನಸಿಕಕಲಿಕೆ. ಇದನ್ನು ನಾವು ಅನೇಕಶತಮಾನಗಳಿಂದ ಸಂಗ್ರಹಿಸಿಕೊಂಡು ಬಂದಿದ್ದೇವೆ.ಅದನ್ನು ಪರಂಪರೆಯೇಂದೋ,ಜ್ಞಾನವೆಂದೋ, ಅನುಭವವೆಂದೋ ಬಳುವಳಿಯಾಗಿ  ಪಡೆದಿದ್ದೇವೆ. ಇದನ್ನು ನಾವು ಕಲಿಕೆಎನ್ನುತ್ತಿದ್ದೇವೆ,ಇದು ನಿಜವಾದ ಕಲಿಕೆಹೌದೇ ಎಂಬುದೇ ಪ್ರಶ್ನೆ.
ವಿಚಾರದಲ್ಲಿ ತೊಡಗುವುದು ಮತ್ತು ಕಲಿಯುವುದು,ಇವೆರಡೂಮನಸ್ಸಿನ ಕಾರ್ಯಗಳು. ಕಲಿಯುವುದೆಂದರೆ ನೆನಪಿನ ಶಕ್ತಿಯನ್ನು ಬೆಳಸಿಕೊಳ್ಳುವುದಲ್ಲ, ಜ್ಞಾನ ಸಂಗ್ರಹವು ಅಲ್ಲ. ಭ್ರಮೆಗಳಿಲ್ಲದೆ ಸ್ಪಷ್ಟವಾಗಿಆಲೋಚಿಸುವ ಸಾಮರ್ಥ್ಯ. ನಂಬಿಕೆ ಅಥವಾ ತೀರ್ಮಾನಗಳಿಂದಹೊರದೆ ಸತ್ಯ ಸಂಗತಿಗಳನ್ನು ಗಮನಿಸುವಸಾಮರ್ಥ್ಯವನ್ನು ಬೆಳೆಸಿಕೊಳ್ಳವುದೇ ಕಲಿಕೆ. ಕೇವಲ ಮಾಹಿತಿಯನ್ನೋ, ಜ್ಞಾನವನ್ನೋ ಸಂಗ್ರಹಿಸಿಒಳ್ಳುವುದರಿಂದ ಏನನ್ನೂ ಕಲಿತಂತಾಗುವುದಿಲ್ಲ. ಕಲಿಕೆಎಂಬುದು ತಿಳುವಳಿಕೆಯ ಬಗ್ಗೆ ಇರುವ ಪ್ರೀತಿಯನ್ನು, ಯಾವುದೇ ಕೆಲಸವನ್ನು ಕೆಲಸದ ಬಗ್ಗೆಇರುವ ಪ್ರೀತಿಯನ್ನು ಸೂಚಿಸುತ್ತದೆ. ಯಾವುದೇ ರೀತಿಯ ಒತ್ತಾಯವಿದ್ದಾಗಕಲಿಕೆ ಸಾಧ್ಯವಾಗುವುದಿಲ್ಲ.

      ಕಲಿಕೆಎಂಬುದು ಸದಾ ಹೊತ್ತಿನ, ಕ್ಷಣದ ಚಟುವಟಿಕೆಯಲ್ಲಿಸಂಭವಿಸುತ್ತಾ ಇರುತ್ತದೆ. ಅದಕ್ಕೆ ಭೂತಕಾಲವೆಂಬುದಿಲ್ಲ. “ನಾನು ಕಲಿತೆಎಂದು ನೀವು ಹೇಳಿದ ಕ್ಷಣದಲ್ಲೇಕಲಿಕೆಯು ಜ್ಞಾನವಾಗಿ ಬದಲಾಗಿಬಿಟ್ಟಿರುತ್ತದೆ. ಜ್ಞಾನವನ್ನು ಹಿನ್ನೆಲೆಯಾಗಿಟ್ಟುಕೊಂಡು ಮತ್ತಷ್ಟು ಸಂಗ್ರಹಿಸಿ ಕೊಳ್ಳಬಹುದು ಆದರೆ ಹೊಸತನ್ನು ಕಲಿಯಲಾಗುವುದಿಲ್ಲ. ಏನನ್ನೂ ಸಂಗ್ರಹಿಸದೆ ಸದಾ ಹೊಸತಾಗಿ ಕಲಿಯುತ್ತಿರುವಮನಸ್ಸು ಮಾತ್ರ ತನ್ನನ್ನು ತಾನುಇಡಿಯಾಗಿ ಅರಿಯಬಲ್ಲದು.”ನಾನುಎಂದರೆ ಏನು ಎಂದುತಿಳಿಯ ಬಲ್ಲದು. ಹಳೆಯ ಜ್ಞಾನದಹೊರೆಯನ್ನು ಹೊತ್ತುಕೊಂಡಿದ್ದಾಗ ನನ್ನ ಸ್ವಭಾವ, ಇಡೀನನ್ನ ರಚನೆ ವಿನ್ಯಾಸ, ಇಡೀನನ್ನ ಮಹತ್ವ ಇವನ್ನು ಅರಿತುಕೊಳ್ಳಲುಸಾಧ್ಯವಿಲ್ಲ. ಜಾಡಿಗೆ ಬಿದ್ದ ಮನಸ್ಸನ್ನುಇಟ್ಟುಕೊಂಡು ನಮ್ಮನ್ನು ನಾವು ತಿಳಿಯಲು ಸಾಧ್ಯವಿಲ್ಲ. ಅಂಥ ಮನಸ್ಸು ವ್ಯಾಖ್ಯಾನ, ಅನುವಾದಮಾಡುತ್ತಿರುತ್ತದೆ. ಭೂತಕಾಲದ ಮುಸುಕಿನೊಳಗಿಂದ ವರ್ತಮಾನವನ್ನುನೋಡುತ್ತೀರುತ್ತದೆ……

(ಮುಂದುವರೆಯುವುದು)
ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು

  ಕಣಬ್ರಹ್ಮವೆಂಕಿ (ವೆಂಕಟೇಶ ಭಂಡಾರಿ), ಭಂಡಾರಿ ವಾರ್ತೆ

0 thoughts on “ಕಲಿಯಬೇಕೆಂದರೆ,ಮನಸ್ಸು ಸುಮ್ಮನೇ ಇರಬೇಕು – (ಧ್ಯಾನ- 2)

  1. ಮನುಷ್ಯ ಕಲಿಯಬೇಕಾದರೆ…ಮಗುವಾಗಬೇಕು- ಎಂದು ಸೂಚ್ಯವಾಗಿ ತಿಳಿಸಿದಂತಿದೆ ಬರಹ.ಸೂಪರ್.

Leave a Reply

Your email address will not be published. Required fields are marked *