September 20, 2024
ಕುಂದಾಪುರ ಕೊಕ್ಕರ್ಣೆಯ ಶ್ರೀ ಲವಕರ ಭಂಡಾರಿ ಮತ್ತು ಶ್ರೀಮತಿ ಶೈಲಜಾ ಭಂಡಾರಿ ಯವರ ಏಕೈಕ ಪುತ್ರಿ ಲಿಷಾ ಕೊಕ್ಕರ್ಣೆ.  ದಿನಾಂಕ 23.2.2020 ರಂದು ಗಂಗೊಳ್ಳಿಯಲ್ಲಿ ನಡೆದ “ಕರಾವಳಿ ಕೋಗಿಲೆ “ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಗಳಿಸಿರುತ್ತಾರೆ. ರೋಟರಿ ಬ್ರಹ್ಮಾವರದ ವತಿಯಿಂದ ನಡೆಯುತ್ತಿರುವ “ವಾಯ್ಸ್ ಆಫ್ ಕರಾವಳಿ ಸ್ಪರ್ಧೆ”ಯಲ್ಲಿ ಭಾಗವಹಿಸಿರುವ ಇವರು ದಿನಾಂಕ 29-2-2020 ರಂದು ನಡೆಯಲಿರುವ ಫೈನಲ್ ಸ್ಪರ್ಧೆಗೆ ಆಯ್ಕೆ ಆಗಿರುತ್ತಾರೆ. ಇದಲ್ಲದೇ ಇತ್ತೀಚೆಗೆ ಕಲರ್ಸ್ ಕನ್ನಡ ಆಯೋಜಿಸಿದ್ದ ‘ಹಾಡು ಕರ್ನಾಟಕ’ ಸ್ಪರ್ಧೆಯ ಕರಾವಳಿ ಭಾಗದ ಆಡಿಷನ್ ನಲ್ಲಿ ಆಯ್ಕೆಯಾಗಿದ್ದರು. ನಂತರ ಬೆಂಗಳೂರಿನಲ್ಲಿ ನಡೆದ ಕೊನೆಯ ಹಂತದ ಆಡಿಷನ್ ನಲ್ಲಿ ವೈಟಿಂಗ್ ಲಿಸ್ಟ್ ನಲ್ಲಿದ್ದಾರೆ.
 
 
 
 

 
ದಿನಾಂಕ 12-8-2006ರಲ್ಲಿ ಜನಿಸಿದ ಇವರು L. K. G. ಯಿಂದ ಬ್ರಹ್ಮಾವರದ ಹಾರಾಡಿ G. M. ವಿದ್ಯಾನಿಕೇತನ ಆಂಗ್ಲ ಮಾಧ್ಯಮ  ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದು, ಪ್ರಸ್ತುತ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರ ಅಜ್ಜಿ ಸೀತಾ ಭಂಡಾರಿ ಯವರು ಹಳ್ಳಿಯಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದುದನ್ನು ಬಿಟ್ಟರೆ ಬೇರೆ ಯಾವುದೇ ಸಂಗೀತದ ಹಿನ್ನೆಲೆಯಿಲ್ಲದ ಕುಟುಂಬದಿಂದ ಬಂದ ಇವರು ಸುಮಾರು 25 ಪ್ರಶಸ್ತಿಗಳ ಸರದಾರೆ. ಒಂದನೇ ತರಗತಿಯ ಗುರುಗಳಾದ ಗೀತಾ ರವರಿಂದ ಪ್ರೇರಣೆಗೊಂಡ ಇವರು ನಂತರ ಉಡುಪಿಯ ಮುಕುಂದ ಕೃಪಾ ಸಂಗೀತ ಶಾಲೆಯಲ್ಲಿ ಪ್ರತೀ ಶನಿವಾರ ಮತ್ತು ಭಾನುವಾರ  ಸಂಗೀತ ಅಭ್ಯಾಸ ಪ್ರಾರಂಭಿಸಿದರು. ಶಾಲೆಯಲ್ಲಿ ಪ್ರತೀ ವಾರ ನಡೆಯುವ Talent hour ನಲ್ಲಿ ಹಾಡುತ್ತಿದ್ದ ಇವರು ಶಿಕ್ಷಕರ ಮೆಚ್ಚುಗೆಯನ್ನು ಪಡೆಯುತ್ತಿದ್ದರು.
 
 
 
ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ಕು. ಲಿಷಾರವರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಇಷ್ಟೊಂದು ಮಧುರ ಕಂಠ ವನ್ನು ಹೊಂದಿದ್ದು ಮುಂದೆ ಅತ್ಯುತ್ತಮ ಗಾಯಕಿಯಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಲಿ. ಭಂಡಾರಿ ಸಮಾಜದ ಸಂಗೀತ ಪ್ರತಿಭೆ ಮುಂದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಹೊರಹೊಮ್ಮಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಹಾರೈಸುತ್ತದೆ.
 
 
 
-ರಮೇಶ್ ಭಂಡಾರಿ ಪಾಂಗಾಳ

Leave a Reply

Your email address will not be published. Required fields are marked *