September 20, 2024

ಕಳೆದ 22 ವರ್ಷಗಳಿಂದ ಭಂಡಾರಿ ಸಮುದಾಯದ ಬಂಧುಗಳು ಹಾಗೂ ಸದಸ್ಯರ ಹಣಕಾಸಿನ ಅವಶ್ಯಕತೆಗಳಿಗೆ ಸ್ಪಂದಿಸುತ್ತಾ ಭಂಡಾರಿ ಸಮಾಜದ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಎಂದೇ ಗುರುತಿಸಲ್ಪಟ್ಟಿರುವ ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ ಇದೀಗ ತನ್ನ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಸಂಪೂರ್ಣ ಹವಾನಿಯಂತ್ರಿತ ಕಚೇರಿಗೆ ಸ್ಥಳಾಂತರ ಗೊಳ್ಳಲು ಸಿದ್ಧತೆ ನಡೆಸಿದೆ.

[google-drive-embed url=”https://drive.google.com/file/d/0B5maNXN9fuF3eGNiV3BnVE5iYXpHRFc4eWRtcHFjMXF2aENR/preview?usp=drivesdk” title=”BROUCHER__KACHUR_.pdf” icon=”https://drive-thirdparty.googleusercontent.com/16/type/application/pdf” width=”100%” height=”400″ style=”embed”]

ಸೊಸೈಟಿಯ ಪ್ರಧಾನ ಕಛೇರಿ/ಶಾಖೆ ಪ್ರಸ್ತುತ ಮಂಗಳೂರು ನಗರದ ಕಂಕನಾಡಿ ಬೆಂದೂರ್ ವೆಲ್ ಕುನಿಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದು, ಜ.3 ರಂದು ಬೆಳಗ್ಗೆ  10 ಗಂಟೆಗೆ ಬೆಂದೂರ್ ವೆಲ್ ನ ಏಸ್ಸೆಲ್ ವಿಲ್ಕಾನ್ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ವಿವಿಧ ಬ್ಯಾಂಕಿಂಗ್ ಸೌಲಭ್ಯಗಳಾದ ಗೋಲ್ಡ್ ಲೋನ್, ವೆಹಿಕಲ್ ಲೋನ್, ಹೋಮ್ ಲೋನ್, ಬಿಸಿನೆಸ್ ಲೋನ್, ಮೋರ್ಟ್ ಗೇಜ್ ಲೋನ್, ವಿವಿಧ ಉಳಿತಾಯ ಸೌಲಭ್ಯಗಳ ಮೂಲಕ ಗ್ರಾಹಕರ ವಿಶ್ವಾಸನೀಯ ಸಂಸ್ಥೆ ಎನಿಸಿಕೊಂಡಿದೆ.

ಜತೆಗೆ ಇ-ಸ್ಟಾಂಪಿಂಗ್, ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸ್ ಫರ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡುವಲ್ಲಿ ಮುಂಚೂಣಿಯ ಸಹಕಾರಿಯಾಗಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಅಧ್ಯಕ್ಷ ಎಂ.ಪಿ.ಬಾಲಕೃಷ್ಣ ಭಂಡಾರಿ, ಉಪಾಧ್ಯಕ್ಷ ಚಂದ್ರಶೇಖರ್.ಕೆ, ಪ್ರಧಾನ ವ್ಯವಸ್ಥಾಪಕ ಪದ್ಮನಾಭ ಎಂ. ಹಾಗೂ ನಿರ್ದೇಶಕರ ನೇತೃತ್ವದಲ್ಲಿ ಮುಂದುವರಿಯುತ್ತಿರುವ ಸಂಸ್ಥೆಯು ನಿರಂತರವಾಗಿ ಲಾಭದ ಹಾದಿಯಲ್ಲಿ ಮುಂದುವರಿಯುತ್ತಿದೆ.

ಗ್ರಾಹಕರು ತೋರಿದ ಪ್ರೀತಿ ವಿಶ್ವಾಸವೇ ಸೊಸೈಟಿಯ ಅಭಿವೃದ್ಧಿಗೆ ದಾರಿದೀಪವಾಗಿದೆ ಎಂದು ಹೇಳಿಕೊಳ್ಳುವ ಆಡಳಿತ ಮಂಡಳಿಯು, ಮುಂದೆ ಸ್ಥಳಾಂತರಿತ ಮಳಿಗೆಯಲ್ಲಿ ಇನ್ನಷ್ಟು ಹೆಚ್ಚಿನ ಗ್ರಾಹಕಸ್ನೇಹಿ ಸೇವೆ ನೀಡಲಿದೆ.ಇಲ್ಲಿಯವರೆಗೂ ಉತ್ತಮ ಸಹಕಾರ ನೀಡುತ್ತ ಬಂದಿರುವ ಗ್ರಾಹಕರು ಇನ್ನು ಮುಂದೆಯೂ  ಸಂಸ್ಥೆಯೊಂದಿಗೆ ಸಹಕರಿಸುವಂತೆ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.

ವರದಿ :ಸತೀಶ್ ಭಂಡಾರಿ ಪುತ್ತೂರು 
ನಿರ್ದೇಶಕರು ,ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್

Leave a Reply

Your email address will not be published. Required fields are marked *