September 20, 2024
ಕಾರ್ಕಳ ಸಾಣೂರು ರಾಮಣ್ಣ ಭಂಡಾರಿಯವರು ಸೆಪ್ಟೆಂಬರ್ 24, 2019 ರ ಮಂಗಳವಾರ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
 
ಸಾಣೂರು ರಾಮಣ್ಣ ಭಂಡಾರಿಯವರು ಪತ್ನಿ ಶ್ರೀಮತಿ ಸುಶೀಲಾ ಭಂಡಾರಿ, ಮಕ್ಕಳಾದ ಶ್ರೀ ಸುಕುಮಾರ್ ಭಂಡಾರಿ, ಶ್ರೀ ಸುಧಾಕರ್ ಭಂಡಾರಿ, ಶ್ರೀ ಸುರೇಶ್ ಭಂಡಾರಿ ಮತ್ತು ಶ್ರೀಮತಿ ಸುಜಾತಾ ನಾರಾಯಣ ಭಂಡಾರಿ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
 
 
ಮೃತರ ಆತ್ಮ ಸದ್ಗತಿಗಾಗಿ ವೈಕುಂಠ ಸಮಾರಾಧನೆಯನ್ನು ಅಕ್ಟೋಬರ್ 9,2019 ರ ಬುಧವಾರ ಮಧ್ಯಾಹ್ನ 12:30 ಕ್ಕೆ ಮುರತ್ತಂಗಡಿ “ರಿಜೆನ್ಸಿ ಹಾಲ್” ನಲ್ಲಿ ಏರ್ಪಡಿಸಲಾಗಿದೆ.
 
ರಾಮಣ್ಣ ಭಂಡಾರಿಯವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಿ, ದುಃಖತಪ್ತ ಕುಟುಂಬಸ್ಥರಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ. 
 
“ಭಂಡಾರಿ ವಾರ್ತೆ.”

Leave a Reply

Your email address will not be published. Required fields are marked *