September 20, 2024

ಉಚ್ಚಿಲದ ಪಣಿಯೂರಿನವರಾದ ದಿವಂಗತ ಮೆನ್ಪು ಭಂಡಾರಿಯವರ ಧರ್ಮಪತ್ನಿಯಾಗಿದ್ದ ಕೊಲ್ಲು ಭಂಡಾರಿ ಯವರು ದೀರ್ಘಕಾಲದ ಅನಾರೋಗ್ಯದಿಂದ ಇಂದು ಬೆಳಗಿನ ಜಾವ 5 ಗಂಟೆಗೆ ಉಡುಪಿಯ ಪಾಂಗಳದಲ್ಲಿರುವ ತಮ್ಮ ಮಗ ಶ್ರೀ ರಾಘು ಭಂಡಾರಿಯವರ ನಿವಾಸದಲ್ಲಿ ನಿದನ ಹೊಂದಿದರು. ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು.


ಅವರಿಗೆ ಎರಡು ಹೆಣ್ಣು ಮತ್ತು ಎರಡು ಗಂಡು ಮಕ್ಕಳಿದ್ದರು.ಅವರಲ್ಲಿ ಇಬ್ಬರು ತೀರಿಹೋಗಿದ್ದಾರೆ.ಕೊಲ್ಲು ಭಂಡಾರಿಯವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಪಣಿಯೂರಿನಲ್ಲಿ ನೆರವೇರಿತು.

ಭಗವಂತನು ಕುಟುಂಬವರ್ಗದವರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದಯಪಾಲಿಸಲಿ ಮತ್ತು ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಭಗವಂತನಲ್ಲಿ ಪ್ರಾರ್ಥಿಸುತ್ತದೆ.

ಭಂಡಾರಿವಾರ್ತೆ

Leave a Reply

Your email address will not be published. Required fields are marked *