September 20, 2024

ಕೇರಳದ ತೋಡುಪುಝಾದಲ್ಲಿರುವ ವಿಲೇಜ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ LKG ಓದುತ್ತಿರುವ ಕುಮಾರಿ ಕ್ಷಿಪ್ರ ಬಸವರಾಜ್ ಶಾಲೆಯಲ್ಲಿ ಏರ್ಪಡಿಸಿದ್ದ ನೃತ್ಯ ಸ್ಪರ್ಧೆಯಲ್ಲಿ ತುಳು ಭಾಷೆಯ ಹಾಡಿಗೆ ತನ್ನ ಸಹಪಾಠಿಯೊಡಗೂಡಿ ಅದ್ಭುತ ನೃತ್ಯ ಪ್ರದರ್ಶನ ನೀಡಿ ದ್ವಿತೀಯ ಬಹುಮಾನ ಗಳಿಸಿರುತ್ತಾಳೆ.

ಇವರು ಖ್ಯಾತ ಅರ್ಥೋಪೆಡಿಕ್ ಸರ್ಜನ್ ಶ್ರೀ ಬಸವರಾಜ್. ಕೆ ಮತ್ತು ಶ್ರೀಮತಿ ಕೃತಿ ಬಸವರಾಜ್ (ಕಾರ್ಕಳದ ಇರ್ವತ್ತೂರು ಗೋವಿಂದ ಭಂಡಾರಿಯವರ ಮಗಳು.) ದಂಪತಿಗಳ ಪುತ್ರಿ.

ಕ್ಷಿಪ್ರ ಬಸವರಾಜ್ ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಉನ್ನತ ಸಾಧನೆ ಮಾಡಲಿ.ಭಗವಂತನು ಅವಳಿಗೆ ಆಯುರಾರೋಗ್ಯ ಭಾಗ್ಯ ನೀಡಿ ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭಹಾರೈಸುತ್ತದೆ.

ಭಂಡಾರಿವಾರ್ತೆ

Leave a Reply

Your email address will not be published. Required fields are marked *