September 20, 2024

ಕುಂದಾಪುರ ಅಚ್ಲಾಡಿ ಬಿರ್ತಿ ಭಂಡಾರಿ ಕುಟುಂಬದ ಹಿರಿಯರಾದ ಬಿರ್ತಿ
ಶ್ರೀ ನರಸಿಂಹ ಭಂಡಾರಿಯವರು ಏಪ್ರಿಲ್ 28 ರ ಬುಧವಾರ ಅಪರಾಹ್ನ ಅಚ್ಲಾಡಿಯ ಸ್ವಗ್ರಹದಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಅವರು ಪತ್ನಿ ಶ್ರೀಮತಿ ಸಂಪ, ಪುತ್ರರಾದ ಭೂಷಣ್, ಭರತ್, ಶರತ್
ಮಗಳು ಭವ್ಯ, ಅಳಿಯ ಸೊಸೆಯಂದಿರು ಮೊಮ್ಮಕ್ಕಳು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

ಬಿರ್ತಿ ನೋವಿನ ಎಣ್ಣೆ ಖ್ಯಾತಿಯ ಭಂಡಾರಿ ಕುಟುಂಬದ ಮುತ್ತಕ್ಕ ಭಂಡಾರ್ತಿಯವರ ಏಳು ಮಕ್ಕಳಲ್ಲಿ ನಾಲ್ಕನೇಯಾವರಾದ ಇವರು ಕ್ಷೌರಿಕ ವೃತ್ತಿಯನ್ನು ಮಾಡುತ್ತಿದ್ದು ಇತ್ತೀಚಿನ ಕೆಲವು ವರ್ಷಗಳಿಂದ ಅಚ್ಲಾಡಿಯ ಮನೆಯಲ್ಲಿ ಕೃಷಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.

ಮೃತರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ನೀಡಲಿಎಂದು ಕುಟುಂಬಿಕರು ಹಾಗೂ ಬಂಧು ಮಿತ್ರರ ಪ್ರಾರ್ಥನೆ.

ಮೃತರ ಅಗಲುವಿಕೆಯ ದುಃಖವನ್ನು ಪತ್ನಿ ಮಕ್ಕಳು ಮತ್ತು ಕುಟುಂಬಸ್ಥರಿಗೆ ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.

ವರದಿ : ರಮೇಶ್ ಭಂಡಾರಿ ಪಾಂಗಳ

Leave a Reply

Your email address will not be published. Required fields are marked *