September 20, 2024

ದಿವಂಗತ ಬಾಲಕೃಷ್ಣ ಭಂಡಾರಿ ಮತ್ತು ದಿವಂಗತ ಪ್ರೇಮಾ ಭಂಡಾರಿ ಕಾಸರಗೋಡು ಇವರ ಪುತ್ರ ಮಂಗಳೂರು ತಾಲೂಕು ಕಾವೂರಿನ ಪುಷ್ಪರಾಜ್ ಭಂಡಾರಿಯವರು ಹೃದಯಾಘಾತದಿಂದ ಡಿಸೆಂಬರ್ 30 ರ ಗುರುವಾರ ಮುಂಜಾನೆ ವಿಧಿವಶರಾದರು. ಅವರಿಗೆ 46 ವರ್ಷ ವಯಸ್ಸಾಗಿತ್ತು.


ಭಂಡಾರಿ ಸಮಾಜ ಹಾಗೂ ಸವಿತಾ ಸಮಾಜದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಪುಷ್ಪರಾಜ್ ಭಂಡಾರಿ ಜನಾನುರಾಗಿಯಾಗಿದ್ದರು.

ಮೃತರು ಧರ್ಮ ಪತ್ನಿ ಸುಚಿತ್ರ ಇಬ್ಬರು ಹೆಣ್ಣುಮಕ್ಕಳಾದ ನಿಶಾ ಮತ್ತು ಪೂರ್ವಿ ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

ದಿವಂಗತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕುಟುಂಬಕ್ಕೆ ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *