September 20, 2024

ಶಿವಮೊಗ್ಗ ಜಿಲ್ಲೆಯ ಸೊರಬದ ದಿವಂಗತ ಹಾಲಾಡಿ ರಾಜು ಭಂಡಾರಿ ಮತ್ತು ಗಿರಿಜಮ್ಮ ರಾಜು ಭಂಡಾರಿಯವರ ತೃತೀಯ ಪುತ್ರ
ಚಿ|| ಉಮೇಶ್ ಭಂಡಾರಿ.
ಮತ್ತು ಕುಂದಾಪುರ ತಾಲೂಕಿನ ಆನೆಗುಡ್ಡೆಯ ಶ್ರೀ ಅಶೋಕ್ ಭಂಡಾರಿ ಮತ್ತು ಶ್ರೀಮತಿ ಪದ್ಮಾವತಿ ಅಶೋಕ್ ಭಂಡಾರಿಯವರ ದ್ವಿತೀಯ ಪುತ್ರಿ
ಚಿ||ಸೌ|| ಉಷಾ.
ಇವರ ವಿವಾಹವು ಏಪ್ರಿಲ್ 19 ರ ಗುರುವಾರ ಆನೆಗುಡ್ಡೆಯ ಶ್ರೀ ವಿನಾಯಕ ಸಭಾಗೃಹದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದ ಸೊರಬ,ಸಾಗರ,ಹಾಲಾಡಿ,ಕಮ್ಮರಡಿ,ಹುಣ್ಸೆಮಕ್ಕಿ ಭಂಡಾರಿ ಕುಟುಂಬಸ್ಥರು ಮತ್ತು ಬಂಧು ಮಿತ್ರರು ನೂತನ ವಧುವರರಿಗೆ ಶುಭ ಹಾರೈಸಿ ಹರಸಿದರು.

ನವಜೀವನಕ್ಕೆ ಪಾದಾರ್ಪಣೆ ಮಾಡಿದ ಉಮೇಶ್ ಮತ್ತು ಉಷಾ ದಂಪತಿಯನ್ನು ಶ್ರೀ ದೇವರು ಆಯುರಾರೋಗ್ಯ,ಐಶ್ವರ್ಯವನ್ನಿತ್ತು ಹರಸಲಿ,ಸುಖ ಶಾಂತಿ ನೆಮ್ಮದಿಯುತ ಜೀವನ ನಿಮ್ಮದಾಗಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತಾ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

 

— ಭಂಡಾರಿವಾರ್ತೆ.

Leave a Reply

Your email address will not be published. Required fields are marked *