September 20, 2024

ಉಡುಪಿಯ ಕಸ್ತೂರಬಾ ನಗರದ ಕೆಂಜೂರು ಶ್ರೀ ನರಸಿಂಹ ಭಂಡಾರಿ ಮತ್ತು ಶ್ರೀಮತಿ ಲಕ್ಷ್ಮೀ ನರಸಿಂಹ ಭಂಡಾರಿಯವರ ಪ್ರಥಮ ಪುತ್ರ
ಚಿ|| ದೀಪಕ್ ಭಂಡಾರಿ.
ಪೆರ್ಡೂರಿನ ಶಿರೂರು ಶ್ರೀ ಹರೀಶ್ ಭಂಡಾರಿ ಮತ್ತು ಶ್ರೀಮತಿ ಶೋಭಾ ಹರೀಶ್ ಭಂಡಾರಿಯವರ ತೃತೀಯ ಪುತ್ರಿ
ಚಿ||ಸೌ|| ರಂಜಿತಾ.
ಇವರ ವಿವಾಹವು ಚಿಟ್ಪಾಡಿಯ “ದೇವಾಡಿಗರ ಭವನ” ದಲ್ಲಿ ಏಪ್ರಿಲ್ 20 ರ ಶುಕ್ರವಾರ ವೈಭವದಿಂದ ಜರುಗಿತು.


ವಿವಾಹ ಸಂಭ್ರಮಕ್ಕೆ ಗುರು ಹಿರಿಯರು,ಬಂಧು ಮಿತ್ರರು,ಆತ್ಮೀಯರು,ಹಿತೈಷಿಗಳು ಸಾಕ್ಷೀಭೂತರಾಗಿ ನವ ವಧುವರರನ್ನು ಹರಸಿ ಹಾರೈಸಿದರು.

ಹೊಸಬಾಳಿನ ಹೊಸಿಲಲಿ ನಿಂತಿರುವ ನವಜೋಡಿಗೆ ಭಗವಂತನು ಸಕಲ ಸನ್ಮಂಗಳವನ್ನುಂಟುಮಾಡಲಿ ಮತ್ತು ಅವರ ಸಕಲ ಇಷ್ಟಾರ್ಥಗಳನ್ನು ನೆರವೇರಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ”ಯು ಶುಭ ಹಾರೈಸುತ್ತದೆ.

— ಭಂಡಾರಿವಾರ್ತೆ.

Leave a Reply

Your email address will not be published. Required fields are marked *