September 20, 2024
ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮತ್ತು ಮಂಗಳೂರಿನ ಕಲ್ಕುರ ಪ್ರತಿಷ್ಠಾನದವರು ಕದ್ರಿಯ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಶ್ರೀ ಕೃಷ್ಣ ಛದ್ಮವೇಷ ಸ್ಪರ್ಧೆಯಲ್ಲಿ “ಗೀತಾ ಕೃಷ್ಣ” ವಿಭಾಗದಿಂದ ಸ್ಪರ್ಧಿಸಿದ ಅದ್ವಿತ್.ಎಂ.ಭಂಡಾರಿ ತೀರ್ಪುಗಾರರ ಮನಗೆದ್ದು ಪ್ರಥಮ ಬಹುಮಾನ ಗಳಿಸಿದ್ದಾರೆ.
ಅದ್ವಿತ್ ಕಾವೂರಿನ ಶ್ರೀ ಮಿಥುನ್‌ ಭಂಡಾರಿ ಮತ್ತು ಶ್ರೀಮತಿ ದಿವ್ಯಾ ಮಿಥುನ್‌ ಭಂಡಾರಿ ದಂಪತಿಯ ಪುತ್ರ.
ಅದ್ವಿತ್ ಮಿಥುನ್‌ ಭಂಡಾರಿಯವರಿಗೆ ಶ್ರೀ ದೇವರು ಆಶೀರ್ವದಿಸಿ ಸಕಲ ಸನ್ಮಂಗಳವನ್ನುಂಟು ಮಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ.

Leave a Reply

Your email address will not be published. Required fields are marked *