September 20, 2024
ಉಡುಪಿ ತಾಲೂಕು ಉದ್ಯಾವರದ ಶ್ರೀ ಕೃಷ್ಣ ಭಂಡಾರಿ ಮತ್ತು ಶ್ರೀಮತಿ ಮಾಲತಿ ಕೃಷ್ಣ ಭಂಡಾರಿ ದಂಪತಿಗಳ ಪುತ್ರ 
ಚಿ||ಮಿಥೆಶ್ ಮತ್ತು ಬಂಟ್ವಾಳ ತಾಲೂಕು ಬೈಪಾಸ್ ರಸ್ತೆಯ ಕಸ್ಬಾ ಗ್ರಾಮದ ಶ್ರೀ ಹೇಮೇಂದ್ರ ಭಂಡಾರಿ ಮತ್ತು ಶ್ರೀಮತಿ ಅನಸೂಯಾ ಹೇಮೇಂದ್ರ ಭಂಡಾರಿ ದಂಪತಿಗಳ ಪುತ್ರಿ 
ಚಿ||ಸೌ||ಪ್ರಿಯ ಇವರ ವಿವಾಹ ಮಹೋತ್ಸವವು ಫೆಬ್ರವರಿ 21 ರ ಬುಧವಾರ ಮಂಗಳೂರು ತಾಲೂಕು ಅರ್ಕುಳದ ಯಶಸ್ವಿ ಕಲ್ಯಾಣ ಮಂಟಪ ದಲ್ಲಿ ಅತೀ ವಿಜೃಂಭಣೆಯಿಂದ ನೆರವೇರಿತು.
ನೆರೆದಿದ್ದ ಅಪಾರ ಸಂಖ್ಯೆಯ ಬಂಧುಮಿತ್ರರು ಕುಟುಂಬಸ್ಥರು ಹಾಗೂ ಆತ್ಮೀಯರು ನವವಧುವರರಿಗೆ ಆಶೀರ್ವದಿಸಿ ಹಾರೈಸಿದರು.
ನವಜೀವನಕ್ಕೆ ಪಾದಾರ್ಪಣೆಗೈದ ನೂತನ ದಂಪತಿಗಳಿಗೆ ಭಗವಂತನು ಆಯುರಾರೋಗ್ಯ ಭಾಗ್ಯ, ಐಶ್ವರ್ಯವನ್ನು ದಯಪಾಲಿಸಿ, ಅವರ ಸಕಲ ಇಷ್ಟಾರ್ಥಗಳನ್ನು ಪೂರೈಸಿ ನೆಮ್ಮದಿಯುತ ಜೀವನ ನಡೆಸುವಂತೆ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಮನಃಪೂರ್ವಕವಾಗಿ ಹಾರೈಸುತ್ತದೆ.
-ಭಂಡಾರಿವಾರ್ತೆ.

Leave a Reply

Your email address will not be published. Required fields are marked *