September 19, 2024

ಮೂಡಬಿದ್ರೆ ಬಸವನಕಜೆಯ  ಅಲಂಗಾರು ದಿವಂಗತ ಬೂಬ ಭಂಡಾರಿ ಮತ್ತು ಚಿಕ್ಕಿ ಭಂಡಾರಿ ಯ ಪುತ್ರ  ಶ್ರೀ ಶ್ರೀಧರ್ ಭಂಡಾರಿಯವರು ಅಲ್ಪ ಕಾಲದ ಅಸೌಖ್ಯದಿಂದ ಮೇ 25 ರ ಬುಧವಾರ ಬೆಳಿಗ್ಗೆ 6.30 ಕ್ಕೆ ವಿಧಿವಶರಾದರು ಅವರಿಗೆ  ಸುಮಾರು  74  ವರ್ಷ ವಯಸ್ಸಾಗಿತ್ತು .

ದಿವಂಗತರು ಪತ್ನಿ ಸರಸ್ವತಿ, ಇಬ್ಬರು ಮಕ್ಕಳಾದ ಸಾಗರ್ ಮತ್ತು ಸ್ವಾತಿ , ಅಳಿಯ , ಸೊಸೆ, ಮೊಮ್ಮಕಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ
ಮೃತರ ಅಂತ್ಯಕ್ರಿಯೆಯು ಮೇ 25 ರ ಬುಧವಾರ ಸಂಜೆ 4 ಗಂಟೆಗೆ ಮೂಡಬಿದ್ರಿ ರುದ್ರಭೂಮಿಯಲ್ಲಿ ನಡೆಯಲಿದೆಯೆಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಒದಗಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *