September 20, 2024
ಮೂಡಬಿದಿರೆಯ ಮಹಾವೀರ ಕಾಲೇಜು ಬಳಿಯ ಮಹಾವೀರ ನಗರದ ಮಿಜಾರು ಬರ್ಕೆ ಶ್ರೀ ರಮೇಶ್‌ ಭಂಡಾರಿಯವರು ನವೆಂಬರ್‌ 24 ರ ಶನಿವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.ಅವರಿಗೆ ಎಪ್ಪತ್ತು ವರ್ಷ ವಯಸ್ಸಾಗಿತ್ತು. 
ಸಿಂಡಿಕೇಟ್ ಬ್ಯಾಂಕಿನ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಇವರು ಮೂಡಬಿದಿರೆಯ ಭಂಡಾರಿ ಸಮಾಜ ಸಂಘದ  ಅಧ್ಯಕ್ಷರಾಗಿಯೂ ಭಂಡಾರಿ ಸಮಾಜದ ಏಳಿಗೆಗಾಗಿ ದುಡಿದಿದ್ದಾರೆ.  
ಪತ್ನಿ ಶ್ರೀಮತಿ ಜಯಂತಿ, ಪುತ್ರಿಯರಾದ ಶ್ರೀಮತಿ ಸುಪ್ರಿಯಾ ಮತ್ತು ಶ್ರುತಿ, ಅಳಿಯ ರಾಕೇಶ್ ಹಾಗೂ ಬಂದು ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ನವೆಂಬರ್ 25 ರ ಅದಿತ್ಯವಾರ ಬೆಳಿಗ್ಗೆ 11 ಗಂಟೆಗೆ ಮೂಡಬಿದಿರೆಯಲ್ಲಿ ನೆರವೇರಲಿದೆ.
ರಮೇಶ್‌ ಭಂಡಾರಿಯವರ ಪತ್ನಿ , ಮಕ್ಕಳು, ಕುಟುಂಬಸ್ಥರಿಗೆಅವರ ನಿಧನದ  ದುಃಖವನ್ನು  ಭರಿಸುವ ಶಕ್ತಿಯನ್ನು ಭಗವಂತನು  ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಭಕ್ತಿಪೂರ್ವಕ ಪ್ರಾರ್ಥನೆ.
-ಭಂಡಾರಿವಾರ್ತೆ.

Leave a Reply

Your email address will not be published. Required fields are marked *